ಈ ಮಳೆಗಾಲದಲ್ಲಿ ನಮ್ಮೂರಿನ ಗುಡ್ಡ ಕುಸಿದ ಜಾಗಗಳಲ್ಲಿ ಓಡಾಡುವಾಗ ಒಂದು ಕಡೆ ದೊಡ್ಡ ವಿಸ್ಮಯ ಎನಿಸುವಂಥದ್ದು ಕಂಡಿತು. ಕಾಫಿ ತೋಟದ ಪುಟ್ಟ ಕಣಿವೆಯೊಂದು ಗುಡ್ಡದ ಮಣ್ಣು , ನೀರು ಕೊಚ್ಚಿ ಬಂದ ಪರಿಣಾಮ ಐವತ್ತರವತ್ತು ಅಡಿ ಅಗಲದಷ್ಟು ದೊಡ್ಡ ಹೊಳೆಯಾಗಿ ಮಾರ್ಪಟ್ಟಿತ್ತು.!
ಮಣ್ಣಿನಡಿಯಿಂದ ದೊಡ್ಡ ಗಾತ್ರದ ಕಲ್ಲುಗಳು ಉದ್ಭವವಾಗಿದ್ದವು. ಅದೊಂದು ಹೊಸತಾಗಿ ಹುಟ್ಟಿಕೊಂಡ ಹೊಳೆ. ಅದನ್ನು ನೋಡಿದಾಗ ನನಗನ್ನಿಸಿದ್ದು ಅಲ್ಲಿದ್ದಿರಬಹುದಾದ ಹೊಳೆಯೊಂದು ಹಿಂದ್ಯಾವತ್ತೋ ನಿರಂತರವಾಗಿ ಮುಚ್ಚುತ್ತಾ ಹೋಗಿ ಕಡೆಗೆ ಮಾಯವೇ ಆದ ಪರಿಣಾಮ ಅಥವಾ ಹೊಳೆಯನ್ನೂ ಒತ್ತುವರಿ ಮಾಡಿ ತೋಟ ಮಾಡಿದ ಪರಿಣಾಮ ಆ ಮಣ್ಣಿನಡಿಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಹೊಳೆಯು ತನ್ನ ಸಮಯ ಬಂದಾಗ ಸ್ಪೋಟಿಸಿಕೊಂಡು ತನ್ನ ಜಾಗವನ್ನು ತೆರವು ಮಾಡಿಕೊಂಡಿತೇನೋ... ಇದೇ Nature engineering!
ಪ್ರಕೃತಿ ತನ್ನನ್ನೇ ತಾನು ಶುದ್ದೀಕರಿಸಿಕೊಳ್ಳುವ ಪರಿ.! ಅಥವಾ ಸಮತೋಲನ ಮಾಡಿಕೊಳ್ಳುವ ರೀತಿ.
ಬರ, ನೆರೆ, ಭೂಕಂಪ, ಕಾಡ್ಗಿಚ್ಚು ಎಲ್ಲವೂ ಪ್ರಕೃತಿಯ ಇಚ್ಛೆಗನುಸಾರವಾಗಿಯೇ ನಡೆಯುವಂಥದ್ದು.
ತಾನು ಸಾಕುತ್ತಿರುವ ಸಕಲ ಜೀವರಾಶಿಗಳಲ್ಲಿ ಎಲ್ಲೋ ಸಮತೋಲನ ತಪ್ಪುತ್ತಿದೆ ಎಂದು ಅರಿವಾದ ತಕ್ಷಣ ಪ್ರಕೃತಿ ಮುಲಾಜಿಲ್ಲದೇ ಜರಡಿ ಹಿಡಿದು ಕೆಳಗೆ ಉದುರಿದ ಜೀವಿಗಳನ್ನು ಎತ್ತಿ ಹೊರಗೆಸೆಯುತ್ತದೆ. ಉದುರದೇ ಉಳಿದುಕೊಂಡವರು ಮುಂದಿನ filtration ಪ್ರಕಿಯೆ ನಡೆಯುವ ತನಕ ಸೇಫ್.! ಮುಂದಿನ ಕಾರ್ಯಾಚರಣೆಯನ್ನು ಪ್ರಕೃತಿ ಮರು ವರ್ಷವೇ ನಡೆಸಬಹುದು ಅಥವಾ ಮುಂದಿನ ಶತಮಾನಕ್ಕೂ ನಡೆಸಬಹುದು ಲೆಕ್ಕಾಚಾರ ಅದಕ್ಕೆ ಬಿಟ್ಟಿದ್ದು.
ಹಾಗೆಯೇ ಈ ಸಾಂಕ್ರಾಮಿಕ ರೋಗಗಳು.
ಸಾಂಕ್ರಾಮಿಕ ರೋಗವು ಸಾಮೂಹಿಕ ಮಾರಣ ಹೋಮ ನಡೆಸುತ್ತಿರುವುದು ಇದೇ ಮೊದಲೇನಲ್ಲ.
ಇತಿಹಾಸದ ಪುಟವನ್ನೊಮ್ಮೆ ತಿರುವಿದರೆ ಇಂಥಾ ಹತ್ತಾರು ಸಾಂಕ್ರಾಮಿಕ ರೋಗಗಳು ಲಕ್ಷಾಂತರಗಟ್ಟಲೆ ಜನರನ್ನು ಹಿಂಡಿ ಬಿಸಾಕಿದ ದಾಖಲೆಗಳಿವೆ.
ಪ್ಲೇಗ್ ಎಂಬ ಮಾರಿಯು ಐದು ಸಾವಿರ ವರ್ಷಗಳ ಹಿಂದೆಯೇ ಗ್ರೀಸ್ ಅನ್ನು ಸುಡುಗಾಡು ಮಾಡಿಹಾಕಿತ್ತು ಎಂಬ ಉಲ್ಲೇಖವಿದೆ.
1920 ರಲ್ಲಿ ಅದೇ ಪ್ಲೇಗು ಜಗತ್ತಿನಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಜನರ ಜೀವ ಕಿತ್ತುಕೊಂಡಿತ್ತು. ಅದಾದ ಮೇಲೆ ಹತ್ತಾರು ಸಾಂಕ್ರಾಮಿಕಗಳು ಬೇರೆ ಬೇರೆ ಹೆಸರುಗಳಲ್ಲಿ ಬಂದಿವೆ ಕೊರೋನಾ ಅದಕ್ಕೊಂದು ಸೇರ್ಪಡೆಯಷ್ಟೇ. ಇದಿನ್ನು ಅದೆಷ್ಟು ಮಂದಿಯನ್ನು ನುಂಗುತ್ತದೋ...!
ಈ ಪ್ರಕೃತಿಯ ಸ್ವಯಂ ಶುದ್ಧೀಕರಣ ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಲ್ಲ. ಕಾಡ್ಗಿಚ್ಚು, ಪಕ್ಷಿ ಜ್ವರ, ಸಾಗರದಲ್ಲಿ ಮೀನಿಗೆ ಬರುವ ಕ್ಯಾನ್ಸರ್ ಎಲ್ಲವೂ ಶುದ್ಧೀಕರಣದ ಸಲುವಾಗಿಯೇ ನಡೆಯುವಂಥದ್ದು. ಇತ್ತೀಚೆಗಷ್ಟೇ ಅಮೆಝಾನ್ ಕಾಡಿನಲ್ಲಿ ನಡೆದ ಕಾಡ್ಗಿಚ್ಚೂ ಅಂಥದ್ದೇ ಒಂದು. ಆದರೆ ಮನುಷ್ಯ ಸತ್ತಾಗ ಮಾತ್ರ ದೊಡ್ಡ ಕೋಲಾಹಲವಾಗುತ್ತದೆಯಷ್ಟೇ...!
ಇದೀಗ ಪ್ರಕೃತಿ ಮತ್ತೆ ಜರಡಿಯಾಡಿಸುತ್ತಿದೆ. ಅದಿನ್ನೆಷ್ಟು ಹೊಟ್ಟನ್ನು ಹೊರಗೆಸೆಯುತ್ತದೋ...!
ಮಣ್ಣಿನಡಿಯಿಂದ ದೊಡ್ಡ ಗಾತ್ರದ ಕಲ್ಲುಗಳು ಉದ್ಭವವಾಗಿದ್ದವು. ಅದೊಂದು ಹೊಸತಾಗಿ ಹುಟ್ಟಿಕೊಂಡ ಹೊಳೆ. ಅದನ್ನು ನೋಡಿದಾಗ ನನಗನ್ನಿಸಿದ್ದು ಅಲ್ಲಿದ್ದಿರಬಹುದಾದ ಹೊಳೆಯೊಂದು ಹಿಂದ್ಯಾವತ್ತೋ ನಿರಂತರವಾಗಿ ಮುಚ್ಚುತ್ತಾ ಹೋಗಿ ಕಡೆಗೆ ಮಾಯವೇ ಆದ ಪರಿಣಾಮ ಅಥವಾ ಹೊಳೆಯನ್ನೂ ಒತ್ತುವರಿ ಮಾಡಿ ತೋಟ ಮಾಡಿದ ಪರಿಣಾಮ ಆ ಮಣ್ಣಿನಡಿಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಹೊಳೆಯು ತನ್ನ ಸಮಯ ಬಂದಾಗ ಸ್ಪೋಟಿಸಿಕೊಂಡು ತನ್ನ ಜಾಗವನ್ನು ತೆರವು ಮಾಡಿಕೊಂಡಿತೇನೋ... ಇದೇ Nature engineering!
ಪ್ರಕೃತಿ ತನ್ನನ್ನೇ ತಾನು ಶುದ್ದೀಕರಿಸಿಕೊಳ್ಳುವ ಪರಿ.! ಅಥವಾ ಸಮತೋಲನ ಮಾಡಿಕೊಳ್ಳುವ ರೀತಿ.
ಬರ, ನೆರೆ, ಭೂಕಂಪ, ಕಾಡ್ಗಿಚ್ಚು ಎಲ್ಲವೂ ಪ್ರಕೃತಿಯ ಇಚ್ಛೆಗನುಸಾರವಾಗಿಯೇ ನಡೆಯುವಂಥದ್ದು.
ತಾನು ಸಾಕುತ್ತಿರುವ ಸಕಲ ಜೀವರಾಶಿಗಳಲ್ಲಿ ಎಲ್ಲೋ ಸಮತೋಲನ ತಪ್ಪುತ್ತಿದೆ ಎಂದು ಅರಿವಾದ ತಕ್ಷಣ ಪ್ರಕೃತಿ ಮುಲಾಜಿಲ್ಲದೇ ಜರಡಿ ಹಿಡಿದು ಕೆಳಗೆ ಉದುರಿದ ಜೀವಿಗಳನ್ನು ಎತ್ತಿ ಹೊರಗೆಸೆಯುತ್ತದೆ. ಉದುರದೇ ಉಳಿದುಕೊಂಡವರು ಮುಂದಿನ filtration ಪ್ರಕಿಯೆ ನಡೆಯುವ ತನಕ ಸೇಫ್.! ಮುಂದಿನ ಕಾರ್ಯಾಚರಣೆಯನ್ನು ಪ್ರಕೃತಿ ಮರು ವರ್ಷವೇ ನಡೆಸಬಹುದು ಅಥವಾ ಮುಂದಿನ ಶತಮಾನಕ್ಕೂ ನಡೆಸಬಹುದು ಲೆಕ್ಕಾಚಾರ ಅದಕ್ಕೆ ಬಿಟ್ಟಿದ್ದು.
ಹಾಗೆಯೇ ಈ ಸಾಂಕ್ರಾಮಿಕ ರೋಗಗಳು.
ಸಾಂಕ್ರಾಮಿಕ ರೋಗವು ಸಾಮೂಹಿಕ ಮಾರಣ ಹೋಮ ನಡೆಸುತ್ತಿರುವುದು ಇದೇ ಮೊದಲೇನಲ್ಲ.
ಇತಿಹಾಸದ ಪುಟವನ್ನೊಮ್ಮೆ ತಿರುವಿದರೆ ಇಂಥಾ ಹತ್ತಾರು ಸಾಂಕ್ರಾಮಿಕ ರೋಗಗಳು ಲಕ್ಷಾಂತರಗಟ್ಟಲೆ ಜನರನ್ನು ಹಿಂಡಿ ಬಿಸಾಕಿದ ದಾಖಲೆಗಳಿವೆ.
ಪ್ಲೇಗ್ ಎಂಬ ಮಾರಿಯು ಐದು ಸಾವಿರ ವರ್ಷಗಳ ಹಿಂದೆಯೇ ಗ್ರೀಸ್ ಅನ್ನು ಸುಡುಗಾಡು ಮಾಡಿಹಾಕಿತ್ತು ಎಂಬ ಉಲ್ಲೇಖವಿದೆ.
1920 ರಲ್ಲಿ ಅದೇ ಪ್ಲೇಗು ಜಗತ್ತಿನಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಜನರ ಜೀವ ಕಿತ್ತುಕೊಂಡಿತ್ತು. ಅದಾದ ಮೇಲೆ ಹತ್ತಾರು ಸಾಂಕ್ರಾಮಿಕಗಳು ಬೇರೆ ಬೇರೆ ಹೆಸರುಗಳಲ್ಲಿ ಬಂದಿವೆ ಕೊರೋನಾ ಅದಕ್ಕೊಂದು ಸೇರ್ಪಡೆಯಷ್ಟೇ. ಇದಿನ್ನು ಅದೆಷ್ಟು ಮಂದಿಯನ್ನು ನುಂಗುತ್ತದೋ...!
ಈ ಪ್ರಕೃತಿಯ ಸ್ವಯಂ ಶುದ್ಧೀಕರಣ ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಲ್ಲ. ಕಾಡ್ಗಿಚ್ಚು, ಪಕ್ಷಿ ಜ್ವರ, ಸಾಗರದಲ್ಲಿ ಮೀನಿಗೆ ಬರುವ ಕ್ಯಾನ್ಸರ್ ಎಲ್ಲವೂ ಶುದ್ಧೀಕರಣದ ಸಲುವಾಗಿಯೇ ನಡೆಯುವಂಥದ್ದು. ಇತ್ತೀಚೆಗಷ್ಟೇ ಅಮೆಝಾನ್ ಕಾಡಿನಲ್ಲಿ ನಡೆದ ಕಾಡ್ಗಿಚ್ಚೂ ಅಂಥದ್ದೇ ಒಂದು. ಆದರೆ ಮನುಷ್ಯ ಸತ್ತಾಗ ಮಾತ್ರ ದೊಡ್ಡ ಕೋಲಾಹಲವಾಗುತ್ತದೆಯಷ್ಟೇ...!
ಇದೀಗ ಪ್ರಕೃತಿ ಮತ್ತೆ ಜರಡಿಯಾಡಿಸುತ್ತಿದೆ. ಅದಿನ್ನೆಷ್ಟು ಹೊಟ್ಟನ್ನು ಹೊರಗೆಸೆಯುತ್ತದೋ...!
Comments
Post a Comment