Skip to main content

ಪ್ರೀತಿಯೆಂದರೆ....

ನಾನು ಪ್ರೀತಿಯ ಬಗ್ಗೆ ಏನಾದರೂ ಬರೆದರೆ ನನ್ನ ಬಗ್ಗೆ ಗೊತ್ತಿರುವ ಕೆಲವರು ಭಯಂಕರವಾಗಿ ನಕ್ಕುಬಿಡುತ್ತಾರೆ. ಕಾರಣ ನಾನದೆಷ್ಟು ಒರಟು ಮುಂಡೇದು ಎಂದು ಅವರಿಗೆ ಗೊತ್ತು. ನನ್ನ ಆತ್ಮಬಂಧುವೊಬ್ಬರು feeling less ಕತ್ತೆ ಎಂದೇ ಕರೆಯುತ್ತಾರೆ.  ನಾನೋ ಬಂಡ ನನ್ಮಗ ಅವರ ಬೈಗುಳವೆಲ್ಲಾ ನನಗೆ ತಾಗುವುದಿಲ್ಲ ಬಿಡಿ.😁

ಅದೆಲ್ಲಾ ಅತ್ಲಾಗಿರಲಿ...
 ನೀವು ಗಮನಿಸಿ ನೋಡಿ ಅಥವಾ ಅನುಭವಿಸಿ ನೋಡಿ.( ಕೆಲವರು ಅನುಭವಿಸುತ್ತಲೂ ಇರಬಹುದು.!) ನಿಜವಾದ ಪ್ರೀತಿ ಹುಟ್ಟುವುದು ಕೇವಲ ಒಬ್ಬಳ/ನ ಮೇಲೆ ಮಾತ್ರ. ಮತ್ತು ಆಳವಾಗಿ ಪ್ರೀತಿಸಲು ಸಾಧ್ಯವಾಗುವುದು ಕೇವಲ‌ ಒಂದು ಜೀವವನ್ನು ಮಾತ್ರ. ಒಂದೇಸಲಕ್ಕೆ ಇಬ್ಬರನ್ನು ಪ್ರೀತಿಸುತ್ತೇನೆ, ಮೂರು ಮತ್ತೊಬ್ಬರನ್ನು ಪ್ರೀತಿಸುತ್ತೇನೆ ಅಂದುಕೊಳ್ಳುವುದು ಮುಠಾಳತನ ಅಥವಾ ಆತ್ಮವಂಚನೆ. ಎರಡನೆಯವರನ್ನು ನೀವು ಮೋಹಿಸಬಹುದಷ್ಟೇ ಅಥವಾ ಕಾಮಿಸಬಹುದಷ್ಟೇ ಅದನ್ನೇ ಪ್ರೀತಿಯೆಂದು ಭ್ರಮಿಸಬಹುದಷ್ಟೇ. ಅದರಾಚೆಗೆ ನೀವು ಉಸ್ಸಪ್ಪಾ ಇವಳೇ/ನೇ ನನ್ನ ಜೀವ ಎಂದು ಪ್ರೀತಿಸಲು ಸಾಧ್ಯವೇ ಇಲ್ಲ. ಹಾಗೆ ಪ್ರೀತಿಸುತ್ತೇನೆ ಎಂದು ಚಾಲೆಂಜುಗೀಲೆಂಜು ಹಾಕಿದಿರೆಂದರೆ ನೀವು ಮೊದಲಿನ ಪ್ರೀತಿಗೆ ದ್ರೋಹವೆಸಗುತ್ತಿದ್ದೀರೆಂದಷ್ಟೇ ಅರ್ಥ. 
ದೇಹ ಹತ್ತಾರು ಜನರ ಭಾವನೆಗಳಿಗೆ, ಕ್ರಿಯೆಗಳಿಗೆ, ಆಮಿಷಕ್ಕೆ, ಆಸೆಗೆ, ಅವತಾರಕ್ಕೆ ಬಹುಬೇಗನೆ ಸ್ಪಂದಿಸಿಬಿಡುತ್ತದೆ. ಆದರೆ ಮನಸ್ಸು ಹಾಗಲ್ಲ, ಅದು ಒಬ್ಬರಿಗೆ ಮಾತ್ರ ಸ್ಪಂದಿಸುತ್ತದೆ ಮತ್ತು ಆತುಕೊಳ್ಳುತ್ತದೆ. 
ಸುಮ್ಮನೆ ಒಂದು ಪರೀಕ್ಷೆ ಮಾಡಿನೋಡಿ. ಮೊದಲನೇ ಪ್ರೀತಿ ಮತ್ತು ಎರಡನೇ ಪ್ರೀತಿ( ಎರಡನೆಯವರನ್ನೂ ನಾನು ತಳದಿಂದ ಪ್ರೀತಿಸುತ್ತೇನೆ ಎನ್ನುವವರು!) ಎರಡನ್ನೂ ಒಂದು ತಕ್ಕಡಿಗೆ ಹಾಕಿ ತೂಗುತ್ತಾ ಕುಳಿತುಕೊಳ್ಳಿ. ಮೊದಲನೆಯದು ಮಾಡುವ ತಪ್ಪುಗಳು, ಹುಚ್ಚಾಟಗಳು, ಸಣ್ಣಪುಟ್ಟ ವೀಕ್ನೆಸ್ಸುಗಳು ಎಲ್ಲವೂ ಕ್ಷುಲ್ಲಕ ಎನಿಸುತ್ತವೆ. ಅವು ವಿಪರೀತಕ್ಕೆ ಹೋದರೂ ಕ್ಷಮೆಗೆ ಅರ್ಹ. ಈಗ ಎರಡನೆಯದನ್ನು ನೋಡಿ. ಅದರ ಸಣ್ಣ ಪುಟ್ಟ ಮಿಸ್ಟೇಕುಗಳೂ ಕಿರಿಕಿರಿ ಹುಟ್ಟಿಸುತ್ತವೆ.  
ಅಲ್ಲಿಗೆ ನಾವು ಕಂಡೀಷನ್ನುಗಳಿಲ್ಲದೇ ಪ್ರೀತಿಸಲು ಸಾಧ್ಯವಾಗುವುದು ಒಬ್ಬರನ್ನೇ ಎಂಬುದು ಸಾಬೀತು. 
ಬಿಡಿ ಇವೆಲ್ಲಾ ಪ್ರೀತಿಸುವವರ ಕರ್ಮ. ನಮಗ್ಯಾಕೆ ಊರು ಉಸಾಬರಿ. ಇವತ್ತು ಇದೇ ವಿಚಾರವಾಗಿ ಯಾರೊಂದಿಗೋ ಚರ್ಚಿಸುವಾಗ ಇದನ್ನು ಬರೀಬೇಕನಿಸಿತು. ಸುಮ್ಮನೆ ಬರೆದೆ. 
ಇಂತವನ್ನೆಲ್ಲಾ ಬರೆದು ನಾವ್ಯಾಕೆ ಮೂರು ನಾಲ್ಕು ಜನರನ್ನು ಒಟ್ಟೊಟ್ಟಿಗೆ ಪ್ರೀತಿಸುವವರಿಗೆ ಕಿರಿಕಿರಿ ಮಾಡಬೇಕು. ಅಲ್ಲವಾ !? 😉

Comments

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...

ಕೀಟ ಸಾಮ್ರಾಜ್ಯ ಹಾಗೂ ಆಧುನಿಕ ಕೃಷಿ

 ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಶ್ರೀಯುತ. ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಸಹ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ  ಬೆಳೆದಿರುವ ಎರಡು ವರ್ಷ ವಯಸ್ಸಿನ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ.  ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ‌ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು.  ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು ಕ್ಷಣ ಆಲೋಚಿಸಿ ನೋಡಿ. ರಾಸಾಯನಿಕ ವಿಷವನ್ನು ಬಳಸಿ ನಾವು ಕೊಲ್ಲುತ್ತಿರುವುದಾದರೂ ಯಾವುದನ್ನು!?  ಕಳೆಗೆ ಸಿಂಪಡಿಸುವ ರಾಸಾಯನಿಕವು ಕಳೆಯಿಂದ ನೆಲಕ್ಕಿಳಿದು ಕಣ್ಣಿಗೆ ಕಾಣದ, ಜೀವ ವೈವಿಧ್ಯದ ಅಮೂಲ್ಯ ಭಾಗವಾದ ಲಕ್ಷಾಂತರ, ಕೋಟ್ಯಾಂತರ ಕ್ರಿಮಿ, ಕೀಟಗಳನ್ನು ಅನಾಮತ್ತು ಕೊಲ್ಲುತ್ತಿರುವುದರ ಬಗ್ಗೆ ಔಷಧಿಯ ಹೆಸರಿನಲ್ಲಿ ಹಣ್ಣು, ಸೊಪ್ಪು, ತರಕಾರಿಯಿಂದ್ಹಿಡಿದು ತಿನ್ನುವ ಅನ್ನಕ್ಕೂ ವಿಷವಿಕ್ಕುತ್ತಿರುವ ನಾವು ಯೋಚಿಸಿದ್ದೇವೆಯಾ ? ಯೋಚಿಸುತ್ತೇವೆಯಾ ?  ನಾವು ಔಷಧವೆಂದು ಬಳಸುತ್ತಿರುವ ರಾಸಾಯನಿಕವು ಔಷಧಿಯೇ ಆಗಿದ್ದಿದ್ದಲ್ಲಿ ನಮ್ಮ ತೋಟ, ನಮ್ಮ ಹೊ...