ನನ್ನೂರಿನ ಸರಹದ್ದಿನ ತೋಟವೊಂದಕ್ಕೆ ಹುಲಿ ಬಂದ ಬಗ್ಗೆ ಸುದ್ದಿಯೊಂದು ನಿನ್ನೆ ನಮ್ಮ ವಾಟ್ಸಾಪ್ ಗ್ರೂಪ್'ಗೆ ಬಂದಿತ್ತು. ಕಾಕತಾಳೀಯವೆಂಬಂತೆ ನಾನು ಅದೇ ಹೊತ್ತಿನಲ್ಲಿ ಮಲೆಗಳಲ್ಲಿ ಮದುಮಗಳು ಮಹಾ ಕಾವ್ಯದಲ್ಲಿನ ನಾಯಿಗುತ್ತಿ ದಾರಿಯಲ್ಲೆದುರಾದ ಹುಲಿಯನ್ನು ಓಡಿಸುವ ಪ್ರಸಂಗವನ್ನು ಓದುತ್ತಿದ್ದೆ!
ಹುಲಿಯನ್ನು ಬೆದರಿಸಿ ಓಡಿಸಿದ ನಂತರ ಗುತ್ತಿ ಮಾಮೂಲಿಯಾಗಿ ಹೆಜ್ಜೆ ಹಾಕುತ್ತಾನೆ. ಹುಲಿಯೂ ಕೂಡಾ ಪರಿಸರದ ಉಳಿದೆಲ್ಲಾ ಪ್ರಾಣಿಗಳಂತೆ ಒಂದು ಪ್ರಾಣಿ ಅಷ್ಟೇ ಎಂಬಂತೆ.
ಅವತ್ತಿನ ಕಾಲಕ್ಕೆ ಅದು ನಿಜ ಕೂಡಾ.... ಒಂಚೂರು ಹೆಚ್ಚಿನ ಕಿರಿಕಿರಿಯ ಪ್ರಾಣಿ ಅಷ್ಟೇ.!
ಮನೆಯ ಪಕ್ಕದ ಹಟ್ಟಿಗೇ ಬಂದು ದನ ಮುರಿಯುತ್ತಿದ್ದ ಹುಲಿಯ ಕತೆಯನ್ನು ದಳಿಮನೆಯ ದೊಡ್ಡ ಕುರ್ಚಿಯಲ್ಲಿ ಕುಳಿತು ಅಜ್ಜಿ ತಣ್ಣಗೆ ಹೇಳುವಾಗ ಕೇಳುತ್ತಿದ್ದ ನಮಗೆ ಕೂದಲೆಲ್ಲಾ ನೆಟ್ಟಗಾಗುವಂಥಾ ರೋಮಾಂಚನ. ಕತೆ ಮುಂದುವರಿದಂತೆ ಗಳಿಗೆಗೊಮ್ಮೆ ದಳಿಯಾಚೆಯ ಕತ್ತಲಿನೊಳಕ್ಕೆ ಒಮ್ಮೆ ದೀರ್ಘವಾಗಿ ಹೊಕ್ಕು ಹುಡುಕುತ್ತಿದ್ದೆವು. ಹುಲಿ ಹೊರಗೆಲ್ಲಾದರೂ ಅವಿತು ಕುಳಿತು ಅಜ್ಜಿಯ ಕಥೆಗೆ ಕಿವಿಗಿವಿ ಕೊಡುತ್ತಿದೆಯೇನೋ ಎಂಬ ಅವ್ಯಕ್ತ ಅನುಮಾನ ನಮಗೆ.!
ಮಲೆನಾಡಿನ ಹಳೆಯ ಬಹುತೇಕ ಕತೆಗಳು ಹುಲಿಯೊಂದಿಗೇ ಮಿಳಿತವಾಗಿರುತ್ತಿತ್ತು. ಆದರೆ ಎಂದಿಗೂ ಹುಲಿ ಬಂತೆಂದು ಊರು ಬಿಟ್ಟ, ತೋಟ ಗದ್ದೆಗೆ ಹೋಗುವುದನ್ನು ಬಿಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ಹೆಚ್ಚೆಂದರೆ ಹುಲಿ ಕಾಟ ಮಿತಿಮೀರಿದರೆ ಕೋವಿ ಹಿಡಿದು ಬೆರಸಾಡಿ ಹುಲಿಯನ್ನೇ ಊರು ಬಿಡಿಸುತ್ತಿದ್ದರು.!
ಆದರೆ ಈಗ ಎಲ್ಲವೂ exaggeration ಮನಸ್ಥಿತಿ. ಮನೆಬಾಗಿಲಿಗೆ ಒಂದು ಹಾವು ಬಂದರೂ ಮಲೆನಾಡಿನ ಜನ ಸಣ್ಣಗೆ ಬೆವರುತ್ತಿದ್ದಾರೆ. ಹುಲಿ ಬಂದರಂತೂ ಊರು ಬಿಡುವ ಮಾತನಾಡುತ್ತಾರೆ. ಅರಣ್ಯ ಇಲಾಖೆಗೆ ಶಾಪ ಹಾಕತೊಡಗುತ್ತಾರೆ. ಬಹುಶಃ ಬದಲಾದ ಸಾಮಾಜಿಕ ಸ್ಥಿತಿಗತಿಗಳು ಕಾರಣವೇನೋ... ನಾವು Delicate ಆಗುತ್ತಿರುವುದರ ಸೂಚಕವೂ ಇರಬಹುದು.
ಎಲ್ಲದಕ್ಕಿಂತಾ ಹೆಚ್ಚಾಗಿ 'ಬದುಕಿಗಾಗಿ ಕೃಷಿ' ಎಂಬುದು ಮರೆಯಾಗಿ 'ಕೃಷಿಗಾಗಿಯೇ ಬದುಕು' ಎಂಬ ಕಾಲಮಾನದಲ್ಲಿ ಬದುಕುತ್ತಿರುವುದೂ ಕಾರಣವಿರಬಹುದೇನೋ... ಹೀಗಾಗಿ ನಮಗೀಗ ನಮಗಿಂತ ಶಕ್ತಿಶಾಲಿಯಾದ ಯಾವ ಜಂತುವೂ ನಮ್ಮ ಪರಿಸರದೊಳಕ್ಕೆ ಬರುವುದು ಸಹ್ಯವಾಗುತ್ತಿಲ್ಲ.!
ಹುಲಿಯನ್ನು ಬೆದರಿಸಿ ಓಡಿಸಿದ ನಂತರ ಗುತ್ತಿ ಮಾಮೂಲಿಯಾಗಿ ಹೆಜ್ಜೆ ಹಾಕುತ್ತಾನೆ. ಹುಲಿಯೂ ಕೂಡಾ ಪರಿಸರದ ಉಳಿದೆಲ್ಲಾ ಪ್ರಾಣಿಗಳಂತೆ ಒಂದು ಪ್ರಾಣಿ ಅಷ್ಟೇ ಎಂಬಂತೆ.
ಅವತ್ತಿನ ಕಾಲಕ್ಕೆ ಅದು ನಿಜ ಕೂಡಾ.... ಒಂಚೂರು ಹೆಚ್ಚಿನ ಕಿರಿಕಿರಿಯ ಪ್ರಾಣಿ ಅಷ್ಟೇ.!
ಮನೆಯ ಪಕ್ಕದ ಹಟ್ಟಿಗೇ ಬಂದು ದನ ಮುರಿಯುತ್ತಿದ್ದ ಹುಲಿಯ ಕತೆಯನ್ನು ದಳಿಮನೆಯ ದೊಡ್ಡ ಕುರ್ಚಿಯಲ್ಲಿ ಕುಳಿತು ಅಜ್ಜಿ ತಣ್ಣಗೆ ಹೇಳುವಾಗ ಕೇಳುತ್ತಿದ್ದ ನಮಗೆ ಕೂದಲೆಲ್ಲಾ ನೆಟ್ಟಗಾಗುವಂಥಾ ರೋಮಾಂಚನ. ಕತೆ ಮುಂದುವರಿದಂತೆ ಗಳಿಗೆಗೊಮ್ಮೆ ದಳಿಯಾಚೆಯ ಕತ್ತಲಿನೊಳಕ್ಕೆ ಒಮ್ಮೆ ದೀರ್ಘವಾಗಿ ಹೊಕ್ಕು ಹುಡುಕುತ್ತಿದ್ದೆವು. ಹುಲಿ ಹೊರಗೆಲ್ಲಾದರೂ ಅವಿತು ಕುಳಿತು ಅಜ್ಜಿಯ ಕಥೆಗೆ ಕಿವಿಗಿವಿ ಕೊಡುತ್ತಿದೆಯೇನೋ ಎಂಬ ಅವ್ಯಕ್ತ ಅನುಮಾನ ನಮಗೆ.!
ಮಲೆನಾಡಿನ ಹಳೆಯ ಬಹುತೇಕ ಕತೆಗಳು ಹುಲಿಯೊಂದಿಗೇ ಮಿಳಿತವಾಗಿರುತ್ತಿತ್ತು. ಆದರೆ ಎಂದಿಗೂ ಹುಲಿ ಬಂತೆಂದು ಊರು ಬಿಟ್ಟ, ತೋಟ ಗದ್ದೆಗೆ ಹೋಗುವುದನ್ನು ಬಿಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ಹೆಚ್ಚೆಂದರೆ ಹುಲಿ ಕಾಟ ಮಿತಿಮೀರಿದರೆ ಕೋವಿ ಹಿಡಿದು ಬೆರಸಾಡಿ ಹುಲಿಯನ್ನೇ ಊರು ಬಿಡಿಸುತ್ತಿದ್ದರು.!
ಆದರೆ ಈಗ ಎಲ್ಲವೂ exaggeration ಮನಸ್ಥಿತಿ. ಮನೆಬಾಗಿಲಿಗೆ ಒಂದು ಹಾವು ಬಂದರೂ ಮಲೆನಾಡಿನ ಜನ ಸಣ್ಣಗೆ ಬೆವರುತ್ತಿದ್ದಾರೆ. ಹುಲಿ ಬಂದರಂತೂ ಊರು ಬಿಡುವ ಮಾತನಾಡುತ್ತಾರೆ. ಅರಣ್ಯ ಇಲಾಖೆಗೆ ಶಾಪ ಹಾಕತೊಡಗುತ್ತಾರೆ. ಬಹುಶಃ ಬದಲಾದ ಸಾಮಾಜಿಕ ಸ್ಥಿತಿಗತಿಗಳು ಕಾರಣವೇನೋ... ನಾವು Delicate ಆಗುತ್ತಿರುವುದರ ಸೂಚಕವೂ ಇರಬಹುದು.
ಎಲ್ಲದಕ್ಕಿಂತಾ ಹೆಚ್ಚಾಗಿ 'ಬದುಕಿಗಾಗಿ ಕೃಷಿ' ಎಂಬುದು ಮರೆಯಾಗಿ 'ಕೃಷಿಗಾಗಿಯೇ ಬದುಕು' ಎಂಬ ಕಾಲಮಾನದಲ್ಲಿ ಬದುಕುತ್ತಿರುವುದೂ ಕಾರಣವಿರಬಹುದೇನೋ... ಹೀಗಾಗಿ ನಮಗೀಗ ನಮಗಿಂತ ಶಕ್ತಿಶಾಲಿಯಾದ ಯಾವ ಜಂತುವೂ ನಮ್ಮ ಪರಿಸರದೊಳಕ್ಕೆ ಬರುವುದು ಸಹ್ಯವಾಗುತ್ತಿಲ್ಲ.!
Comments
Post a Comment