ಭಾರತ ನಾಟಿ ವೈದ್ಯಕ್ಕೆ ಜಗತ್ತಿಗೇ ಪ್ರಸಿದ್ದಿ.
ನಮ್ಮ ಪೂರ್ವಿಕರು ಹಲವಾರು ಚಿಕ್ಕ, ದೊಡ್ಡ ಖಾಯಿಲೆಗಳಿಗೆ ತಮ್ಮ ಪರಿಸರದಲ್ಲೇ ಔಷಧಿಗಳನ್ನು ಕಂಡುಕೊಂಡಿದ್ದರು. ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ, ದುಬಾರಿ ಖರ್ಚು ಮಾಡಿದರೂ ಗುಣವಾಗದ ಕೆಲವು ಖಾಯಿಲೆಗಳು ನಾಟೀ ಪದ್ದತಿಯಲ್ಲಿ ಖರ್ಚೇ ಇಲ್ಲದೇ ಗಿಡಮೂಲಿಕೆಗಳಿಂದ ಗುಣವಾಗಿಬಿಡುತ್ತವೆ.! ವೈದ್ಯಲೋಕಕ್ಕೇ ಸವಾಲಾಗುವ ಕೆಲವು ಖಾಯಿಲೆಗಳು ಗಿಡಮೂಲಿಕೆಗಳೆದುರು ಬಾಲ ಮುದುರಿಕೊಂಡು ಓಡಿ ಹೋಗಿಬಿಡುತ್ತವೆ. ಇದೇ ನಮ್ಮ ಆಯುರ್ವೇದದ, ನಾಟೀ ವೈದ್ಯ ಪದ್ದತಿಯ ಶಕ್ತಿ.
ನಾನು ಕಣ್ಣಾರೆ ಕಂಡ ಅಂತಹ ನಾಟಿ ವೈದ್ಯರೊಬ್ಬರ ಪರಿಚಯವನ್ನು ನಿಮಗೆ ನೀಡುತ್ತೇನೆ. ಅಗತ್ಯವಿರುವವರು ಬಳಸಿಕೊಳ್ಳಬಹುದು, ಮತ್ತೊಂದಷ್ಟು ಜನರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬಹುದು.
ಕೆಲವು ವರ್ಷಗಳ ಕೆಳಗೆ ನಮ್ಮ ಹುಡುಗ ನವೀನನಿಗೆ ಜಾಂಡೀಸ್ ಆಗಿತ್ತು. ಆಸ್ಪತ್ರೆಯ ಔಷಧಿಗಳು ಕಾಯಿಲೆಯನ್ನು ವಾಸಿಮಾಡದೇ ಉಲ್ಬಣಗೊಂಡಾಗ ಯಾರೋ ಈ ಮೊದಲೇ ಔಷಧಿ ತೆಗೆದುಕೊಂಡು ಸಂಪೂರ್ಣ ಗುಣ ಹೊಂದಿದ್ದವರೊಬ್ಬರು ಕೊಟ್ಟ ವಿಳಾಸ ಹಿಡಿದು ನಾಟಿ ವೈದ್ಯ ರವಿ ಹೆಗ್ಗಡೆಯವರ ಮನೆ ಹುಡುಕುತ್ತಾ ಹೊರಟೆವು. ಉಡುಪಿಯ ಭ್ರಹ್ಮಾವರದಿಂದ ಇಪ್ಪತ್ತೈದು-ಮೂವತ್ತು ಕಿಲೋಮೀಟರು ದೂರದ ಊರದು. ಶ್ರೀ ಕ್ಷೇತ್ರ ಮಂದಾರ್ತಿಯನ್ನು ದಾಟಿ ಹೋಗಬೇಕು. ಹಿಲಿಯಾಣ ಅನ್ನೋ ಊರಿನ ಗೋಳಿಯಂಗಡಿ ಎಂಬಲ್ಲಿಗೆ ಹೋಗಬೇಕಿತ್ತು. ಹಿಲಿಯಾಣದಲ್ಲಿಳಿದು ಆಟೊದಲ್ಲಿ ಆ ಮನೆಯ ಹತ್ತಿರ ಹೋಗಿಳಿದರೆ ನನಗೊಮ್ಮೆ ದಾರಿ ತಪ್ಪಿ ಝೂ ಗೇನಾದ್ರೂ ಬಂದ್ವಾ..!? ಅಂತಾ ಅನುಮಾನವಾಯಿತು. ಇಡೀ ಊರಿಗೆ ಒಂದೇ ಮನೆ, ಸುತ್ತಾ ಕಾಡು, ಹಾಳು ಬಿದ್ದ ಗದ್ದೆಗಳು. ಮುಂಗಸಿ, ಮೊಲ, ನವಿಲುಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ.!
ಸಣ್ಣ ಉಣುಗೋಲಿನ ಗೇಟು ದಾಟಿ ಒಳಹೋದರೆ ಈ ನೂರಾರು ವರ್ಷ ಹಳೆಯದಾದ ಬೃಹದಾಕಾರದ ಮನೆ. ಹಿಂದಿನ ಭಾಗ ಬಿದ್ದು ಹೋಗಿದೆ. ಎರಡು ಬಾರಿ ಕರೆದ ನಂತರ ಒಳಗಿನಿಂದ " ಹೋಯ್ ಏರು..? ಬತ್ತೆ..." ಅನ್ನೋ ಹೆಣ್ಣು ಧ್ವನಿಯೊಂದು ಕೇಳಿಸಿತು. ಹೊರ ಬಂದ ಹೆಣ್ಣುಮಗಳೊಬ್ಬರು ನಮ್ಮ ವಿಷ್ಯ ಕೇಳಿ 'ಓ.. ತಂದೆ ತೀರಿ ಹೋಗಿ ಆರು ತಿಂಗಳಾಯ್ತು, ನಾನೇ ಔಷಧಿ ಕೊಡ್ತೀನಿ..' ಅಂದರು. ಸರಿ, ಮೂಗಿಗೆ ಅದೇನೊ ರಸ ಹಾಕಿ ರಾತ್ರಿಯೊಳಗೆ ಮನೆ ಸೇರಿಕೊಳ್ಳಿ ರಾತ್ರಿಯಿಡೀ ಮೂಗಿನಿಂದ ಹಳದಿ ಬಣ್ಣದ ಸಿಂಬಳ ಹೋಗುತ್ತದೆ, ಎರಡು ದಿನ ಬಿಟ್ಟು ಇದನ್ನು ಕುಡೀರಿ, ಒಂದು ತಿಂಗಳ ನಂತರ ಇನ್ನೊಮ್ಮೆ ಬನ್ನಿ ಅಂದರು.
ಎರಡು ತಿಂಗಳು ಕಳೆಯುವಷ್ಟರಲ್ಲಿ ಯಾವ್ಯಾವುದೋ ಆಸ್ಪತ್ರೆ ತಿರುಗಿದರೂ ಗುಣವಾಗದ, ದಿನೇ ದಿನೆ ಜಾಸ್ತಿ ಯಾಗುತ್ತಿದ್ದ ಜಾಂಡೀಸ್ ಮಾಯವಾಗಿತ್ತು.!
ನಿಮಗ್ಯಾರಿಗಾದರೂ ಜಾಂಡೀಸಿಗೆ ನಾಟಿ ಔಷಧಿ ಬೇಕಿದ್ದಲ್ಲಿ ಅಲ್ಲಿಗೊಮ್ಮೆ ಹೋಗಬಹುದು.
ವಿಳಾಸ: ಶರ್ಮಿಳಾ ಹೆಗ್ಡೆ
ಗೋಳಿಯಂಗಡಿ, ಹಿಲಿಯಾಣ(ಅಂಚೆ)
ಮಂದಾರ್ತಿ, ಬ್ರಹ್ಮಾವರ, ಉಡುಪಿ.
ಮೊ: 9480402606...
ನಮ್ಮ ಪೂರ್ವಿಕರು ಹಲವಾರು ಚಿಕ್ಕ, ದೊಡ್ಡ ಖಾಯಿಲೆಗಳಿಗೆ ತಮ್ಮ ಪರಿಸರದಲ್ಲೇ ಔಷಧಿಗಳನ್ನು ಕಂಡುಕೊಂಡಿದ್ದರು. ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ, ದುಬಾರಿ ಖರ್ಚು ಮಾಡಿದರೂ ಗುಣವಾಗದ ಕೆಲವು ಖಾಯಿಲೆಗಳು ನಾಟೀ ಪದ್ದತಿಯಲ್ಲಿ ಖರ್ಚೇ ಇಲ್ಲದೇ ಗಿಡಮೂಲಿಕೆಗಳಿಂದ ಗುಣವಾಗಿಬಿಡುತ್ತವೆ.! ವೈದ್ಯಲೋಕಕ್ಕೇ ಸವಾಲಾಗುವ ಕೆಲವು ಖಾಯಿಲೆಗಳು ಗಿಡಮೂಲಿಕೆಗಳೆದುರು ಬಾಲ ಮುದುರಿಕೊಂಡು ಓಡಿ ಹೋಗಿಬಿಡುತ್ತವೆ. ಇದೇ ನಮ್ಮ ಆಯುರ್ವೇದದ, ನಾಟೀ ವೈದ್ಯ ಪದ್ದತಿಯ ಶಕ್ತಿ.
ನಾನು ಕಣ್ಣಾರೆ ಕಂಡ ಅಂತಹ ನಾಟಿ ವೈದ್ಯರೊಬ್ಬರ ಪರಿಚಯವನ್ನು ನಿಮಗೆ ನೀಡುತ್ತೇನೆ. ಅಗತ್ಯವಿರುವವರು ಬಳಸಿಕೊಳ್ಳಬಹುದು, ಮತ್ತೊಂದಷ್ಟು ಜನರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬಹುದು.
ಕೆಲವು ವರ್ಷಗಳ ಕೆಳಗೆ ನಮ್ಮ ಹುಡುಗ ನವೀನನಿಗೆ ಜಾಂಡೀಸ್ ಆಗಿತ್ತು. ಆಸ್ಪತ್ರೆಯ ಔಷಧಿಗಳು ಕಾಯಿಲೆಯನ್ನು ವಾಸಿಮಾಡದೇ ಉಲ್ಬಣಗೊಂಡಾಗ ಯಾರೋ ಈ ಮೊದಲೇ ಔಷಧಿ ತೆಗೆದುಕೊಂಡು ಸಂಪೂರ್ಣ ಗುಣ ಹೊಂದಿದ್ದವರೊಬ್ಬರು ಕೊಟ್ಟ ವಿಳಾಸ ಹಿಡಿದು ನಾಟಿ ವೈದ್ಯ ರವಿ ಹೆಗ್ಗಡೆಯವರ ಮನೆ ಹುಡುಕುತ್ತಾ ಹೊರಟೆವು. ಉಡುಪಿಯ ಭ್ರಹ್ಮಾವರದಿಂದ ಇಪ್ಪತ್ತೈದು-ಮೂವತ್ತು ಕಿಲೋಮೀಟರು ದೂರದ ಊರದು. ಶ್ರೀ ಕ್ಷೇತ್ರ ಮಂದಾರ್ತಿಯನ್ನು ದಾಟಿ ಹೋಗಬೇಕು. ಹಿಲಿಯಾಣ ಅನ್ನೋ ಊರಿನ ಗೋಳಿಯಂಗಡಿ ಎಂಬಲ್ಲಿಗೆ ಹೋಗಬೇಕಿತ್ತು. ಹಿಲಿಯಾಣದಲ್ಲಿಳಿದು ಆಟೊದಲ್ಲಿ ಆ ಮನೆಯ ಹತ್ತಿರ ಹೋಗಿಳಿದರೆ ನನಗೊಮ್ಮೆ ದಾರಿ ತಪ್ಪಿ ಝೂ ಗೇನಾದ್ರೂ ಬಂದ್ವಾ..!? ಅಂತಾ ಅನುಮಾನವಾಯಿತು. ಇಡೀ ಊರಿಗೆ ಒಂದೇ ಮನೆ, ಸುತ್ತಾ ಕಾಡು, ಹಾಳು ಬಿದ್ದ ಗದ್ದೆಗಳು. ಮುಂಗಸಿ, ಮೊಲ, ನವಿಲುಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ.!
ಸಣ್ಣ ಉಣುಗೋಲಿನ ಗೇಟು ದಾಟಿ ಒಳಹೋದರೆ ಈ ನೂರಾರು ವರ್ಷ ಹಳೆಯದಾದ ಬೃಹದಾಕಾರದ ಮನೆ. ಹಿಂದಿನ ಭಾಗ ಬಿದ್ದು ಹೋಗಿದೆ. ಎರಡು ಬಾರಿ ಕರೆದ ನಂತರ ಒಳಗಿನಿಂದ " ಹೋಯ್ ಏರು..? ಬತ್ತೆ..." ಅನ್ನೋ ಹೆಣ್ಣು ಧ್ವನಿಯೊಂದು ಕೇಳಿಸಿತು. ಹೊರ ಬಂದ ಹೆಣ್ಣುಮಗಳೊಬ್ಬರು ನಮ್ಮ ವಿಷ್ಯ ಕೇಳಿ 'ಓ.. ತಂದೆ ತೀರಿ ಹೋಗಿ ಆರು ತಿಂಗಳಾಯ್ತು, ನಾನೇ ಔಷಧಿ ಕೊಡ್ತೀನಿ..' ಅಂದರು. ಸರಿ, ಮೂಗಿಗೆ ಅದೇನೊ ರಸ ಹಾಕಿ ರಾತ್ರಿಯೊಳಗೆ ಮನೆ ಸೇರಿಕೊಳ್ಳಿ ರಾತ್ರಿಯಿಡೀ ಮೂಗಿನಿಂದ ಹಳದಿ ಬಣ್ಣದ ಸಿಂಬಳ ಹೋಗುತ್ತದೆ, ಎರಡು ದಿನ ಬಿಟ್ಟು ಇದನ್ನು ಕುಡೀರಿ, ಒಂದು ತಿಂಗಳ ನಂತರ ಇನ್ನೊಮ್ಮೆ ಬನ್ನಿ ಅಂದರು.
ಎರಡು ತಿಂಗಳು ಕಳೆಯುವಷ್ಟರಲ್ಲಿ ಯಾವ್ಯಾವುದೋ ಆಸ್ಪತ್ರೆ ತಿರುಗಿದರೂ ಗುಣವಾಗದ, ದಿನೇ ದಿನೆ ಜಾಸ್ತಿ ಯಾಗುತ್ತಿದ್ದ ಜಾಂಡೀಸ್ ಮಾಯವಾಗಿತ್ತು.!
ನಿಮಗ್ಯಾರಿಗಾದರೂ ಜಾಂಡೀಸಿಗೆ ನಾಟಿ ಔಷಧಿ ಬೇಕಿದ್ದಲ್ಲಿ ಅಲ್ಲಿಗೊಮ್ಮೆ ಹೋಗಬಹುದು.
ವಿಳಾಸ: ಶರ್ಮಿಳಾ ಹೆಗ್ಡೆ
ಗೋಳಿಯಂಗಡಿ, ಹಿಲಿಯಾಣ(ಅಂಚೆ)
ಮಂದಾರ್ತಿ, ಬ್ರಹ್ಮಾವರ, ಉಡುಪಿ.
ಮೊ: 9480402606...
Comments
Post a Comment