Skip to main content

ಮೂಲಿಕೆಯೆಂಬ ಮಂತ್ರದಂಡ

ಭಾರತ ನಾಟಿ ವೈದ್ಯಕ್ಕೆ ಜಗತ್ತಿಗೇ ಪ್ರಸಿದ್ದಿ.
ನಮ್ಮ ಪೂರ್ವಿಕರು ಹಲವಾರು ಚಿಕ್ಕ, ದೊಡ್ಡ ಖಾಯಿಲೆಗಳಿಗೆ ತಮ್ಮ ಪರಿಸರದಲ್ಲೇ ಔಷಧಿಗಳನ್ನು ಕಂಡುಕೊಂಡಿದ್ದರು. ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ, ದುಬಾರಿ ಖರ್ಚು ಮಾಡಿದರೂ ಗುಣವಾಗದ ಕೆಲವು ಖಾಯಿಲೆಗಳು ನಾಟೀ ಪದ್ದತಿಯಲ್ಲಿ ಖರ್ಚೇ ಇಲ್ಲದೇ ಗಿಡಮೂಲಿಕೆಗಳಿಂದ ಗುಣವಾಗಿಬಿಡುತ್ತವೆ.! ವೈದ್ಯಲೋಕಕ್ಕೇ ಸವಾಲಾಗುವ ಕೆಲವು ಖಾಯಿಲೆಗಳು ಗಿಡಮೂಲಿಕೆಗಳೆದುರು ಬಾಲ ಮುದುರಿಕೊಂಡು ಓಡಿ ಹೋಗಿಬಿಡುತ್ತವೆ. ಇದೇ ನಮ್ಮ ಆಯುರ್ವೇದದ, ನಾಟೀ ವೈದ್ಯ ಪದ್ದತಿಯ ಶಕ್ತಿ.
ನಾನು ಕಣ್ಣಾರೆ ಕಂಡ ಅಂತಹ ನಾಟಿ ವೈದ್ಯರೊಬ್ಬರ ಪರಿಚಯವನ್ನು ನಿಮಗೆ ನೀಡುತ್ತೇನೆ. ಅಗತ್ಯವಿರುವವರು ಬಳಸಿಕೊಳ್ಳಬಹುದು, ಮತ್ತೊಂದಷ್ಟು ಜನರೊಂದಿಗೆ ಮಾಹಿತಿಯನ್ನು  ಹಂಚಿಕೊಳ್ಳಬಹುದು.

ಕೆಲವು ವರ್ಷಗಳ ಕೆಳಗೆ ನಮ್ಮ ಹುಡುಗ ನವೀನನಿಗೆ ಜಾಂಡೀಸ್ ಆಗಿತ್ತು. ಆಸ್ಪತ್ರೆಯ ಔಷಧಿಗಳು ಕಾಯಿಲೆಯನ್ನು ವಾಸಿಮಾಡದೇ ಉಲ್ಬಣಗೊಂಡಾಗ ಯಾರೋ ಈ ಮೊದಲೇ ಔಷಧಿ ತೆಗೆದುಕೊಂಡು ಸಂಪೂರ್ಣ ಗುಣ ಹೊಂದಿದ್ದವರೊಬ್ಬರು ಕೊಟ್ಟ ವಿಳಾಸ ಹಿಡಿದು ನಾಟಿ ವೈದ್ಯ ರವಿ ಹೆಗ್ಗಡೆಯವರ ಮನೆ ಹುಡುಕುತ್ತಾ ಹೊರಟೆವು. ಉಡುಪಿಯ ಭ್ರಹ್ಮಾವರದಿಂದ ಇಪ್ಪತ್ತೈದು-ಮೂವತ್ತು ಕಿಲೋಮೀಟರು ದೂರದ ಊರದು. ಶ್ರೀ ಕ್ಷೇತ್ರ ಮಂದಾರ್ತಿಯನ್ನು ದಾಟಿ ಹೋಗಬೇಕು. ಹಿಲಿಯಾಣ ಅನ್ನೋ ಊರಿನ ಗೋಳಿಯಂಗಡಿ ಎಂಬಲ್ಲಿಗೆ ಹೋಗಬೇಕಿತ್ತು. ಹಿಲಿಯಾಣದಲ್ಲಿಳಿದು ಆಟೊದಲ್ಲಿ ಆ ಮನೆಯ ಹತ್ತಿರ ಹೋಗಿಳಿದರೆ ನನಗೊಮ್ಮೆ ದಾರಿ ತಪ್ಪಿ ಝೂ ಗೇನಾದ್ರೂ ಬಂದ್ವಾ..!? ಅಂತಾ ಅನುಮಾನವಾಯಿತು. ಇಡೀ ಊರಿಗೆ ಒಂದೇ ಮನೆ, ಸುತ್ತಾ ಕಾಡು, ಹಾಳು ಬಿದ್ದ ಗದ್ದೆಗಳು. ಮುಂಗಸಿ, ಮೊಲ, ನವಿಲುಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ.!
ಸಣ್ಣ ಉಣುಗೋಲಿನ ಗೇಟು ದಾಟಿ ಒಳಹೋದರೆ ಈ ನೂರಾರು ವರ್ಷ ಹಳೆಯದಾದ ಬೃಹದಾಕಾರದ ಮನೆ. ಹಿಂದಿನ ಭಾಗ ಬಿದ್ದು ಹೋಗಿದೆ. ಎರಡು ಬಾರಿ ಕರೆದ ನಂತರ ಒಳಗಿನಿಂದ " ಹೋಯ್ ಏರು..? ಬತ್ತೆ..." ಅನ್ನೋ ಹೆಣ್ಣು ಧ್ವನಿಯೊಂದು ಕೇಳಿಸಿತು. ಹೊರ ಬಂದ ಹೆಣ್ಣುಮಗಳೊಬ್ಬರು ನಮ್ಮ ವಿಷ್ಯ ಕೇಳಿ 'ಓ.. ತಂದೆ ತೀರಿ ಹೋಗಿ ಆರು ತಿಂಗಳಾಯ್ತು, ನಾನೇ ಔಷಧಿ ಕೊಡ್ತೀನಿ..' ಅಂದರು. ಸರಿ, ಮೂಗಿಗೆ ಅದೇನೊ ರಸ ಹಾಕಿ ರಾತ್ರಿಯೊಳಗೆ ಮನೆ ಸೇರಿಕೊಳ್ಳಿ ರಾತ್ರಿಯಿಡೀ ಮೂಗಿನಿಂದ ಹಳದಿ ಬಣ್ಣದ ಸಿಂಬಳ ಹೋಗುತ್ತದೆ, ಎರಡು ದಿನ ಬಿಟ್ಟು ಇದನ್ನು ಕುಡೀರಿ, ಒಂದು ತಿಂಗಳ ನಂತರ ಇನ್ನೊಮ್ಮೆ ಬನ್ನಿ ಅಂದರು.
ಎರಡು ತಿಂಗಳು ಕಳೆಯುವಷ್ಟರಲ್ಲಿ ಯಾವ್ಯಾವುದೋ ಆಸ್ಪತ್ರೆ ತಿರುಗಿದರೂ ಗುಣವಾಗದ, ದಿನೇ ದಿನೆ ಜಾಸ್ತಿ ಯಾಗುತ್ತಿದ್ದ ಜಾಂಡೀಸ್ ಮಾಯವಾಗಿತ್ತು.!

ನಿಮಗ್ಯಾರಿಗಾದರೂ ಜಾಂಡೀಸಿಗೆ ನಾಟಿ ಔಷಧಿ ಬೇಕಿದ್ದಲ್ಲಿ ಅಲ್ಲಿಗೊಮ್ಮೆ ಹೋಗಬಹುದು.

ವಿಳಾಸ: ಶರ್ಮಿಳಾ ಹೆಗ್ಡೆ
ಗೋಳಿಯಂಗಡಿ, ಹಿಲಿಯಾಣ(ಅಂಚೆ)
ಮಂದಾರ್ತಿ, ಬ್ರಹ್ಮಾವರ, ಉಡುಪಿ.
ಮೊ: 9480402606...

Comments

Popular posts from this blog

ಆಹಾ...! ಚಗಳಿ ಚಟ್ನಿ!!

 ಮಲೆನಾಡು ಹೇಗೆ ಹಸಿರಿಗೆ, ಸ್ವರ್ಗಸಮಾನ ಬೌಗೋಳಿಕ ರಚನೆಗೆ, ವಿಭಿನ್ನ- ವಿಶಿಷ್ಟ ಸಂಸ್ಕೃತಿಗೆ ಪ್ರಸಿದ್ದವೋ ಹಾಗೆಯೇ ವಿಶಿಷ್ಟ ಆಹಾರ ಪದ್ದತಿಗೂ ಪ್ರಸಿದ್ಧಿ.  ಮಲೆನಾಡಿನ ಋತುಮಾನಕ್ಕನುಗುಣವಾದ ಆಹಾರಗಳು ಸ್ಥಳೀಯ ಬದುಕಿನ ಅವಿಭಾಜ್ಯ ಅಂಗ. ಈ ಆಹಾರಗಳು ಕೇವಲ ನಾಲಿಗೆ ರುಚಿಗೆ ಮಾತ್ರ ಸೀಮಿತವಾಗದೇ ಮಲೆನಾಡಿಗರ ಆರೋಗ್ಯದ ಸಮತೋಲನಕ್ಕೂ ಅಪರಿಮಿತ ಕೊಡುಗೆ ನೀಡುತ್ತವೆ. ಇಲ್ಲಿ ಕಾಲಕ್ಕೆ ತಕ್ಕಂತೆ ಆಹಾರ ಕ್ರಮವಿದೆ, ಮಳೆಗಾಲಕ್ಕೊಂದು, ಚಳಿಗಾಲಕ್ಕೊಂದು, ಬೇಸಿಗೆಗೊಂದು ಖಾದ್ಯಗಳಿವೆ, ಅವನ್ನು ಆಯಾ ಕಾಲದಲ್ಲಿಯೇ ತಿನ್ನಬೇಕು. ಏಡಿ, ಕಳಲೆ, ಗದ್ದೆಮೀನು, ಕೆಸು, ಕೆಸುವಿನ ಗೆಡ್ಡೆ , ಅಣಬೆ, ಕಾಡುಗೆಣಸು, ಕಾಡು ಸೊಪ್ಪುಗಳು... ಹೀಗೆ.  ಅದೇ ರೀತಿ ಈ ಚಗಳಿಯ ಚಟ್ನಿ ಕೂಡಾ ನಮ್ಮ ಪ್ರಾಚೀನ ಆಹಾರ ಪದ್ದತಿಯ ಅತಿಮುಖ್ಯ ಖಾದ್ಯ.  ಚಗಳಿ(ಕೆಂಪು ಇರುವೆ) ಅಂದಾಕ್ಷಣ ಹಲವಾರು ಜನ 'ವ್ಯಾಕ್..' ಎಂದು ಮುಖ ಸಿಂಡರಿಸುವುದುಂಟು ಆದರೆ ಅದರ ರುಚಿ ಮತ್ತು ಔಷಧೀಯ ಗುಣಗಳನ್ನು ಮಲೆನಾಡಿಗರು ಮಾತ್ರ ಬಲ್ಲರು. ಬಿಸಿಲು ಏರುವ ಮೊದಲೇ ಜೋಪಾನವಾಗಿ ಮರದಿಂದ ಇಳಿಸಿದ ಚಗಳಿ ಕೊಟ್ಟೆಯನ್ನು ( ಗೂಡು) ಹುರಿದು ಚಟ್ನಿ ಮಾಡುವ ಮಲೆನಾಡಿನ ಮಹಿಳೆಯರ ಕೈಚಳಕಕ್ಕೆ ಅವರೇ ಸಾಟಿ. ಗದಗುಟ್ಟಿಸುವ ಚಳಿಗಾಲದಲ್ಲಿನ ಮಾಮೂಲಿ ಖಾಯಿಲೆಗಳಾದ ಶೀತ, ಜ್ವರ, ವೃದ್ಧರ ಕಫ ಮತ್ತು ಹಲವು ಸಮಸ್ಯೆಗಳಿಗೆ ಈ ಚಟ್ನಿ ರಾಮಬಾಣ.  ಅಯ್ಯೋ ಇರುವೆನೂ ತಿಂತೀರಾ... ! ಅಂತಾ ರಾಗ ಎಳ...

ಹುಲಿ ಬಂತು ಹುಲಿ

ನನ್ನೂರಿನ ಸರಹದ್ದಿನ ತೋಟವೊಂದಕ್ಕೆ ಹುಲಿ ಬಂದ ಬಗ್ಗೆ ಸುದ್ದಿಯೊಂದು ನಿನ್ನೆ ನಮ್ಮ ವಾಟ್ಸಾಪ್ ಗ್ರೂಪ್'ಗೆ ಬಂದಿತ್ತು. ಕಾಕತಾಳೀಯವೆಂಬಂತೆ ನಾನು ಅದೇ ಹೊತ್ತಿನಲ್ಲಿ ಮಲೆಗಳಲ್ಲಿ ಮದುಮಗಳು ಮಹಾ ಕಾವ್ಯದಲ್ಲಿನ ನಾಯಿಗುತ್ತಿ ದಾರಿಯಲ್ಲೆದುರಾದ ಹುಲಿಯನ್ನು ಓಡಿಸುವ ಪ್ರಸಂಗವನ್ನು ಓದುತ್ತಿದ್ದೆ! ಹುಲಿಯನ್ನು ಬೆದರಿಸಿ ಓಡಿಸಿದ ನಂತರ ಗುತ್ತಿ ಮಾಮೂಲಿಯಾಗಿ ಹೆಜ್ಜೆ ಹಾಕುತ್ತಾನೆ.  ಹುಲಿಯೂ ಕೂಡಾ ಪರಿಸರದ ಉಳಿದೆಲ್ಲಾ ಪ್ರಾಣಿಗಳಂತೆ ಒಂದು ಪ್ರಾಣಿ ಅಷ್ಟೇ ಎಂಬಂತೆ. ಅವತ್ತಿನ ಕಾಲಕ್ಕೆ ಅದು ನಿಜ ಕೂಡಾ.... ಒಂಚೂರು ಹೆಚ್ಚಿನ ಕಿರಿಕಿರಿಯ ಪ್ರಾಣಿ ಅಷ್ಟೇ.!   ಮನೆಯ ಪಕ್ಕದ ಹಟ್ಟಿಗೇ ಬಂದು ದನ ಮುರಿಯುತ್ತಿದ್ದ ಹುಲಿಯ ಕತೆಯನ್ನು ದಳಿಮನೆಯ ದೊಡ್ಡ ಕುರ್ಚಿಯಲ್ಲಿ ಕುಳಿತು ಅಜ್ಜಿ ತಣ್ಣಗೆ ಹೇಳುವಾಗ ಕೇಳುತ್ತಿದ್ದ ನಮಗೆ ಕೂದಲೆಲ್ಲಾ ನೆಟ್ಟಗಾಗುವಂಥಾ ರೋಮಾಂಚನ. ಕತೆ ಮುಂದುವರಿದಂತೆ ಗಳಿಗೆಗೊಮ್ಮೆ ದಳಿಯಾಚೆಯ ಕತ್ತಲಿನೊಳಕ್ಕೆ ಒಮ್ಮೆ ದೀರ್ಘವಾಗಿ ಹೊಕ್ಕು ಹುಡುಕುತ್ತಿದ್ದೆವು. ಹುಲಿ ಹೊರಗೆಲ್ಲಾದರೂ ಅವಿತು ಕುಳಿತು ಅಜ್ಜಿಯ ಕಥೆಗೆ ಕಿವಿಗಿವಿ ಕೊಡುತ್ತಿದೆಯೇನೋ ಎಂಬ ಅವ್ಯಕ್ತ ಅನುಮಾನ ನಮಗೆ.! ಮಲೆನಾಡಿನ ಹಳೆಯ ಬಹುತೇಕ ಕತೆಗಳು ಹುಲಿಯೊಂದಿಗೇ ಮಿಳಿತವಾಗಿರುತ್ತಿತ್ತು. ಆದರೆ ಎಂದಿಗೂ ಹುಲಿ ಬಂತೆಂದು ಊರು ಬಿಟ್ಟ, ತೋಟ ಗದ್ದೆಗೆ ಹೋಗುವುದನ್ನು ಬಿಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ಹೆಚ್ಚೆಂದರೆ ಹುಲಿ ಕಾಟ ಮಿತಿಮೀರಿದರೆ ಕೋವಿ...

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...