Skip to main content

Posts

 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...
Recent posts

ವಿಶ್ವ ಜಲದಿನ

ಈಗೊಂದು ಎಂಟ್ಹತ್ತು ವರ್ಷಗಳ ಹಿಂದಿನ ಆಚೆಯ ದಿನಗಳಲ್ಲಿ ಅದೆಂತಹುದೇ ಬಿಸಿಲಿದ್ದರೂ, ತಾಪಮಾನವಿದ್ದರೂ ನೀರಿಗೆ ಬವಣೆ ಪಡಬೇಕಿರಲಿಲ್ಲ. ಬೇಸಿಗೆಯಲ್ಲೂ ಸಹ ಹೊಳೆಯಲ್ಲಿ ಸಾಕಷ್ಟು ನೀರು ಹರಿಯುತ್ತಿತ್ತು, ಗದ್ದೆ ಬಯಲಿನ ನಡುವೆ, ಆಚೀಚಿನ ಬದಿಗಳಲ್ಲಿ ಹರಿದು ಹೊಳೆ ಸೇರುವ ಸಣ್ಣ ಹಳ್ಳ/ತೊರೆಗಳು ಸಣ್ಣದಾಗಿಯಾದರೂ ಹರಿದು ಹೊಳೆಯ ನೀರು ಬತ್ತದಂತೆ ನೋಡಿಕೊಳ್ಳುತ್ತಿದ್ದವು. ಹಾಗಿದ್ದರೆ ಈಗೇನಾಯ್ತು...?  ಮಲೆನಾಡಿನಲ್ಲಿ ಇವತ್ತು ನೀರಿನ ಹರಿವು ಕಡಿಮೆಯಾಗಲು ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು ಈ ಮೊದಲಿನಂತೆ ಜೂನ್ ಮೊದಲವಾರದಿಂದಲೇ ಗಾಳಿ ಸಮೇತ ಹೊಡೆಯುವ ಮಳೆ ಇತ್ತೀಚೆಗೆ ಹದ ತಪ್ಪಿರುವ ಮಾನ್ಸೂನಿನ ಏರಿಳಿತದಿಂದಾಗಿ ಜುಲೈ ಮಧ್ಯದಲ್ಲಿ ಬರಲು ಪ್ರಾರಂಭಿಸಿದೆ. ಅಲ್ಲಿಗೆ ಅರ್ಧ ಮಳೆಗಾಲವೇ ಕಳೆದುಹೋಗಿರುತ್ತದೆ. ಇದರ ಪರಿಣಾಮವಾಗಿ ಜಲಮೂಲಗಳು recharge(ಮರುಪೂರಣ)ಆಗುತ್ತಿಲ್ಲ. ಬಲವಾದ ಗಾಳಿ ಸಮೇತ ಹೊಡೆಯುವ ಮಳೆ ಜಲದ ಕಣ್ಣುಗಳನ್ನು ತೆರೆಯುತ್ತದೆ ಎನ್ನುವ ಮಾತು ಮಲೆನಾಡಿನಲ್ಲಿದೆ. ಅದು ನಿಜವೂ ಕೂಡಾ... ಜುಲೈ ಕಳೆದ ನಂತರ ಅದೆಷ್ಟೇ ಮಳೆ ಸುರಿದರೂ ಘಟ್ಟದ ಬುಡದಲ್ಲಿರುವ ಜಲಪಾತಗಳಲ್ಲಿ ನೀರು ಧಾರಾಕಾರವಾಗಿ ಸುರಿದು ಹೋಗುತ್ತದೆಯೇ ಹೊರತು ಅಂತರ್ಜಲ ವೃದ್ದಿಯಾಗುವುದಿಲ್ಲ. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಸುರಿದ ಮಳೆ ಹೊಳೆಯಲ್ಲಿ ಕೊಚ್ಚಿಹೋಗಿ ಅಣೆಕಟ್ಟೆಗಳನ್ನು ಸೇರಿತೇ ಹೊರತು ಅಂತರ್ಜಲ ಒಂದಿಂಚೂ ಹೆಚ್ಚಾಗಿರಲಾರದು ಬಹುಶಃ.  ಎರಡನೇ ಮುಖ್ಯ...

ಕೀಟ ಸಾಮ್ರಾಜ್ಯ ಹಾಗೂ ಆಧುನಿಕ ಕೃಷಿ

 ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಶ್ರೀಯುತ. ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಸಹ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ  ಬೆಳೆದಿರುವ ಎರಡು ವರ್ಷ ವಯಸ್ಸಿನ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ.  ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ‌ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು.  ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು ಕ್ಷಣ ಆಲೋಚಿಸಿ ನೋಡಿ. ರಾಸಾಯನಿಕ ವಿಷವನ್ನು ಬಳಸಿ ನಾವು ಕೊಲ್ಲುತ್ತಿರುವುದಾದರೂ ಯಾವುದನ್ನು!?  ಕಳೆಗೆ ಸಿಂಪಡಿಸುವ ರಾಸಾಯನಿಕವು ಕಳೆಯಿಂದ ನೆಲಕ್ಕಿಳಿದು ಕಣ್ಣಿಗೆ ಕಾಣದ, ಜೀವ ವೈವಿಧ್ಯದ ಅಮೂಲ್ಯ ಭಾಗವಾದ ಲಕ್ಷಾಂತರ, ಕೋಟ್ಯಾಂತರ ಕ್ರಿಮಿ, ಕೀಟಗಳನ್ನು ಅನಾಮತ್ತು ಕೊಲ್ಲುತ್ತಿರುವುದರ ಬಗ್ಗೆ ಔಷಧಿಯ ಹೆಸರಿನಲ್ಲಿ ಹಣ್ಣು, ಸೊಪ್ಪು, ತರಕಾರಿಯಿಂದ್ಹಿಡಿದು ತಿನ್ನುವ ಅನ್ನಕ್ಕೂ ವಿಷವಿಕ್ಕುತ್ತಿರುವ ನಾವು ಯೋಚಿಸಿದ್ದೇವೆಯಾ ? ಯೋಚಿಸುತ್ತೇವೆಯಾ ?  ನಾವು ಔಷಧವೆಂದು ಬಳಸುತ್ತಿರುವ ರಾಸಾಯನಿಕವು ಔಷಧಿಯೇ ಆಗಿದ್ದಿದ್ದಲ್ಲಿ ನಮ್ಮ ತೋಟ, ನಮ್ಮ ಹೊ...

ಸಾಹಿತ್ಯದ ಆಯ್ಕೆಗಳು

 ಕೆಲವು ತಿಂಗಳ ಹಿಂದೆ ಫೇಸ್ಬುಕ್ ಸ್ನೇಹಿತರೊಬ್ಬರು ತಮ್ಮ ಹೊಸ ಪುಸ್ತಕದ ಬಗ್ಗೆ ಬರೆದುಕೊಂಡಿದ್ದರು. ಹೆಸರೇ ಒಂದು ರೀತಿ ವಿಶಿಷ್ಟವಾಗಿದ್ದುದರಿಂದ 'ಪುಸ್ತಕ ಎಲ್ಲಿ ಸಿಗುತ್ತದೆ?' ಎಂದು ಕೇಳಿದೆ. ಸಧ್ಯಕ್ಕೆ ಇ-ಬುಕ್ ನಲ್ಲಿದೆ ಓದಿ ಅಂದರು, ನನಗೆ ಇ-ಬುಕ್ ಆಗಿ ಬರುವುದಿಲ್ಲ ಪೇಪರ್ ಬ್ಯಾಕ್ (ಪುಸ್ತಕ) ಇದ್ದರೆ ಹೇಳಿ, ಅಂದೆ. ಸಧ್ಯಕ್ಕೆ ಪ್ರಿಂಟ್ ಆಗಿಲ್ಲ, ಆದಾಗ ತಿಳಿಸುತ್ತೇನೆ ಅಂದವರು ಮೊನ್ನೆ ಕಳುಹಿಸಿದ್ದಾರೆ. ಇವತ್ತು ಮನೆಗೆ ಬಂದಾಗ ಪುಸ್ತಕ ಟೀಫಾಯಿಯ ಮೇಲಿತ್ತು. ಓದಲು ಪ್ರಾರಂಭಿಸಿದ್ದೇನೆ, ನಿಜಕ್ಕೂ ಅದ್ಭುತವಾದ ಕಂಟೆಂಟ್.  ಪುಸ್ತಕದ ಬಗ್ಗೆ ಪೂರ್ತಿ ಓದಿದ ಮೇಲೆ ಬರೆಯುತ್ತೇನೆ. ಈಗ ಹೇಳ ಹೊರಟಿದ್ದು ಆ ವಿಚಾರವನ್ನಲ್ಲ. ಇತ್ತೀಚೆಗೆ ಗೆಳೆಯರೊಬ್ಬರೊಂದಿಗೆ ಮಾತನಾಡುತ್ತಾ "ನನಗೆ ಈ ಕಿಂಡಲ್, ಇ-ಬುಕ್ ಗಳಲ್ಲಿ ಓದಲಾಗುವುದಿಲ್ಲ ಮಾರಾಯ್ರೇ.. ಕೈಯ್ಯಲ್ಲಿ ಪುಸ್ತಕ ಹಿಡಿದು ಓದಿದರೆ ಮಾತ್ರ ಓದಿದ್ಹಂಗೆ ಅನಿಸುತ್ತೆ, ಹೀಗಾಗಿ ನನಗೆ ಪುಸ್ತಕವೇ ಹಿತ." ಅಂದಿದ್ದೆ. ಅದಕ್ಕವರು, ನೀವೇನ್ರೀ ಇನ್ನೂ ಯಾವ ಕಾಲದಲ್ಲಿದೀರೀ!? ಕನ್ನಡ ಸಾಹಿತ್ಯ ತಾಂತ್ರಿಕವಾಗಿ ಶ್ರೀಮಂತವಾಗಬೇಕೆಂದು ತೇಜಸ್ವಿಯವರೇ ಹೇಳಿದ್ದರು, ನೀವು ನೋಡಿದ್ರೆ ಅದೇ ಹಳೇ ಕತೆ ಹೇಳ್ತಿದೀರಲಾ... ಅಂದರು.  ಇದೊಳ್ಳೆ ಕತೆಯಾಯಿತಲ್ಲ! ನಾನು ತಾಂತ್ರಿಕವಾಗಿ ಶ್ರೀಮಂತವಾಗಬಾರದು ಅಂತೆಲ್ಲಿ ಹೇಳಿದೆ!?  ನನಗೆ ವೈಯಕ್ತಿಕವಾಗಿ, ಓದಲು ಪುಸ್ತಕವೇ ಇಷ್ಟ ಅಷ್ಟೇ ಅಂದುಕೊ...
 ಅಳಿವಿನಂಚಿನಲ್ಲಿರುವ ಪಕ್ಷಿ ಹಾಗೂ ಅದರ ಕುಟುಂಬವನ್ನು ಉಳಿಸಿಕೊಳ್ಳಲು ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಹಳ್ಳಿಯೊಂದು 36 ದಿನಗಳ ಕಾಲ ಕತ್ತಲೆಯಲ್ಲಿ ಬದುಕಿದ ಹೃದಯ ದೃವಿಸುವಂತಹ ಮಹೋನ್ನತ ಘಟನೆಯಿದು.     ಗುಬ್ಬಚ್ಚಿಯೊಂದು ಗ್ರಾಮದ ಬೀದಿ ದೀಪಗಳ ಮುಖ್ಯ ಸ್ವಿಚ್‌ಬೋರ್ಡ್‌ನಲ್ಲಿ ಮೊಟ್ಟೆಯಿಟ್ಟಿತ್ತು. ಗುಬ್ಬಿಯು ಸುಗಮವಾಗಿ ಕಾವುಕೊಟ್ಟು ಮೊಟ್ಟೆಯೊಡೆದು ಮರಿಗಳು ಹೊರಬರಲು ಅನುವು ಮಾಡಿಕೊಡುವ ಸಲುವಾಗಿ ಜನರು ಬೀದಿ ದೀಪಗಳಿಲ್ಲದೆ ಕೆಲವು ದಿನಗಳನ್ನು ಸಾಗಿಸಲು ನಿರ್ಧರಿಸಿದರು.  ಮೊಟ್ಟೆ ಮರಿಗಳಾಗುವವರೆಗೆ ದೀಪಗಳನ್ನು ಉರಿಸದೇ ಇರುವ ಪರಿಕಲ್ಪನೆಯು ಆ ಗ್ರಾಮದ  20 ವರ್ಷದ ವಿದ್ಯಾರ್ಥಿಯದ್ದು. ಆರಂಭದಲ್ಲಿ ಗುಬ್ಬಚ್ಚಿ ಮತ್ತು ಅದರ ಮೊಟ್ಟೆಗಳನ್ನು ಗಮನಿಸಿದ್ದ ಆ ವಿದ್ಯಾರ್ಥಿ, ಸ್ವಿಚ್ ಬೋರ್ಡಿನೊಳಗಿದ್ದ ಆ ಗೂಡು ಹಾಗೂ ಮೊಟ್ಟೆಗಳ ಫೋಟೋ ತೆಗೆದು ಸುಮಾರು ನೂರು ಕುಟುಂಬಗಳಿರುವ ಆ ಗ್ರಾಮದ ವಾಟ್ಸಾಪ್ ಗುಂಪಿಗೆ ಕಳುಹಿಸಿ, ಮೊಟ್ಟೆಯೊಡೆದು ಮರಿಗಳು ಹೊರಬರುವವರೆಗೂ ಆ ಬೋರ್ಡಿಗೆ ಸಂಪರ್ಕ ಹೊಂದಿರುವ ಬೀದಿದೀಪಗಳನ್ನು ಬಳಸದೇ ಇರಲು ಮನವಿ ಮಾಡಿದ. ಆತನ ಮನವಿಗೆ ಇಡೀ ಗ್ರಾಮ ಓಗೊಟ್ಟು ಮರಿಗಳು ಹೊರಬರುವವರೆಗೂ  ಕತ್ತಲಿನಲ್ಲಿಯೇ ದಿನದೂಡಲು ನಿರ್ಧರಿಸಿತು. ಗ್ರಾಮದ ಒಗ್ಗಟ್ಟಿನ ನಿರ್ಧಾರದ ಫಲವಾಗಿ ಮೂವತ್ತಾರು ದಿನಗಳ ಕಾಲ ಬೀದಿ ದೀಪಗಳು ಸ್ಥಬ್ದವಾದವು. ರಾತ್ರಿಹೊತ್ತು ಬೆಳಕಿಲ್ಲದೇ ಹೊರಹೋಗಲು ಭಯಪಡುತ್ತಿದ್ದ...
 ಇವತ್ತು ನಮ್ಮ ಊರಿನ ಬಳಿಯ ಹುಡುಗನೊಬ್ಬನ ಆತ್ಮಹತ್ಯೆಯ‌ ಸುದ್ದಿ ಕೇಳಿ ಮನಸ್ಸಿಗೆ ಪಿಚ್ಚೆನಿಸಿತು. ಫೋಟೊ ನೋಡಿದರೆ, ಹುಡುಗನ ವಯಸ್ಸು ಇಪ್ಪತ್ತೋ ಇಪ್ಪತ್ತೆರಡೋ ಇರಬಹುದೇನೋ... ಈ ವಯಸ್ಸಿನಲ್ಲಿ ಕೈಯ್ಯಾರೆ ಜೀವ ಕಳೆದುಕೊಳ್ಳುವಂತಹ ಕಷ್ಟ, ಸಮಸ್ಯೆ ಏನಿದ್ದೀತು.!? ಸಂಸಾರದ ಹೊರೆಯಾ ?, ವ್ಯಾಪಾರ ನಷ್ಟವಾ ? ತೀರಿಸಲಾಗದಷ್ಟು ಸಾಲವಾ ? ಉದ್ಯೋಗ ನಷ್ಟ ? ಏನಿದ್ದೀತು... ?  ಹೆಚ್ಚೆಂದರೆ ಪರೀಕ್ಷೆಯಲ್ಲಿ ಫೇಲು, ಮನೆಯಲ್ಲಿ ಬೈಗುಳ, ಕೈ ಕೊಟ್ಟ ಹುಡುಗಿಯ infatuation( ಅದನ್ನೇಹುಡುಗರು ಅಮರ ಪ್ರೇಮವೆಂದು ಭ್ರಮಿಸುತ್ತಾರೆ), ಎಲ್ಲದಕ್ಕಿಂತಾ ದೊಡ್ಡದು ತಾಳ್ಮೆಯೇ ಇರದ ದುಡುಕುತನ ಹಾಗೂ ಮುಂಗೋಪ. ಇವಿಷ್ಟೇ... ಇದರಲ್ಲೊಂದು ಸಮಸ್ಯೆ ಹುಡುಗ/ಹುಡುಗಿಯರನ್ನು ಬೆಟ್ಟದಂತೆ ಕಾಡಿ ಕೊಂದುಬಿಡುತ್ತದೆ.  ಇವಕ್ಕಿಂತಾ ಹೆಚ್ಚಿನದ್ದು ಒಂದೇ ಒಂದು ಸಮಸ್ಯೆ( ಅಸಲಿಗೆ ಇವು ಸಮಸ್ಯೆಗಳೇ ಅಲ್ಲ!) ಈ ವಯಸ್ಸಿನವರಿಗಿದ್ದರೆ ಕೇಳಿ.  ಇವತ್ತಿನ ಸಾಮಾಜಿಕ ವ್ಯವಸ್ಥೆ ಯುವ ಮನಸ್ಸುಗಳನ್ನು ಹೇಗೆ ದುರ್ಬಲವನ್ನಾಗಿಸಿದೆ ಎಂಬುದಕ್ಕೆ ಇಂಥಾ ಉದಾಹರಣೆಗಳು ದಿನಂಪ್ರತಿ ನಮಗೆ ದೊರಕುತ್ತಲೇ ಇರುತ್ತವೆ.  ಗಮನಿಸಿ ನೋಡಿ, ಇಂದಿನ ಹುಡುಗರದ್ದು ಎಲ್ಲವೂ ಅತಿ ವೇಗ, ಅತಿರೇಕ, ಅತಿ ಭಾವುಕ. ತಾವು ಬಯಸಿದ್ದೆಲ್ಲವೂ ಅಂದುಕೊಂಡ  ಸಮಯದೊಳಗೆ ದಕ್ಕಿಬಿಡಬೇಕೆಂಬ ಕಾತರ. ತಾವು ಮಾಡುತ್ತಿರುವುದೇ ಸರಿ ಹಾಗೂ ಇದು ಮಾತ್ರ ಸರಿ ಎಂಬ ಹುಂಬತನ. ಸಣ್ಣ ಸೋಲನ್ನೂ ...
 ಮನುಷ್ಯ ಪ್ರತೀ ಬಾರಿ ಸೋತಾಗಲೂ ಕನಿಷ್ಟ ಐದು ವರ್ಷ ಹಿಂದಕ್ಕೆ ಹೋಗಿಬಿಡುತ್ತಾನೆ. ಪ್ರತೀ ಸೋಲು ದೈಹಿಕವಾಗಿ ವೃದ್ದಾಪ್ಯದೆಡೆಗೆ ದೂಡಿದರೆ, ಮಾನಸಿಕವಾಗಿ ಕುಬ್ಜನನ್ನಾಗಿಸುತ್ತದೆ.  ಸೋತ ವ್ಯಕ್ತಿಯ ಸುತ್ತಲಿನ ಗೆಳೆಯರು, ಸಮವಯಸ್ಕರು, ಕಿರಿಯರು ಆತನನ್ನು ಹಿಂದಕ್ಕೆ ಸರಿಸಿ ಹಲವು ಮೈಲಿಗಳಷ್ಟು ದೂರ ಮುಂದೆ ಹೋಗಿಬಿಟ್ಟಿರುತ್ತಾರೆ. ಆಗಲೇ ಮನುಷ್ಯ ಆಮೆಯಂತಾಗಿಬಿಡುವುದು... ಸೋಲಿಗೆ ಹೆದರಿ,  ಸಮಾಜಕ್ಕೆ ಅಂಜಿ, ಯಾರನ್ನಾದರೂ ಎದುರುಗೊಳ್ಳುವ ಅವಕಾಶವನ್ನು ತಪ್ಪಿಸಲೆತ್ನಿಸುತ್ತಾ ಏಕಾಂತದೊಳಗೆ ತಲೆ ಹುದುಗಿಸಿಕೊಂಡುಬಿಡುತ್ತಾನೆ...  ಇತ್ತ ದರವೇಸಿ ಸೋಲು ಕೂಡಾ ಸೋತವನ ಮೇಲೆಯೇ ಮತ್ತೆ ಮತ್ತೆ ದಾಳಿಯಿಡತೊಡಗುತ್ತದೆ. ಹಣಕಾಸು, ಉದ್ಯೋಗ, ವ್ಯವಹಾರ, ಪ್ರೀತಿ, ಮದುವೆಯಂತಹ ವಿಷಯಗಳಲ್ಲಿ ಮತ್ತೆ ಮತ್ತೆ ಕಾಲೆಳೆದು ಬೀಳಿಸತೊಡಗುತ್ತದೆ. ಅಂಥದ್ದೊಂದು ಯಾತನೆ ಅನುಭವಿಸಿದವರಿಗೇ ಗೊತ್ತು. ದಿನನಿತ್ಯದ ಖರ್ಚುಗಳನ್ನು ತೂಗಿಸಲು, ತೆಗೆದುಕೊಂಡ ಸಾಲ ತೀರಿಸಲು ಪರದಾಡುವಾಗ, ಮದುವೆಗೆ ಹುಡುಗಿ ಸಿಗದೇ ವಯಸ್ಸು ಮೀರುವಾಗ, ಹಿಡಿದ ಕೆಲಸಗಳು ಹೊಳೆಯಲ್ಲಿನ ಹುಣಸೆ ಹಣ್ಣಾದಾಗ, ತನಗಿಂತ ಕಡಿಮೆ ಓದಿದ, ಕಡಿಮೆ ಬುದ್ದಿ ಮತ್ತೆಯ, ಕಡಿಮೆ ಯೋಗ್ಯತೆಯ, ಕಡಿಮೆ ವಯಸ್ಸಿನ , ತನ್ನಿಂದಲೇ ಸಹಾಯ ಪಡೆದ, ಕೆಲವೇ ವರ್ಷಗಳ ಕೆಳಗೆ ತನ್ನೆದುರು ಏನೂ ಅಲ್ಲದ ಜನಗಳು ತಾನು ಸೋತ ವಿಷಯಗಳಲ್ಲೆಲ್ಲಾ ಗೆದ್ದು ತನ್ನೆದುರೇ ಚೆಂದದ ಬದುಕನ್ನು ಬದುಕುವಾಗ ಆಗುವ ನಿರಾಸೆ...