Skip to main content

ಸಾಹಿತ್ಯದ ಆಯ್ಕೆಗಳು

 ಕೆಲವು ತಿಂಗಳ ಹಿಂದೆ ಫೇಸ್ಬುಕ್ ಸ್ನೇಹಿತರೊಬ್ಬರು ತಮ್ಮ ಹೊಸ ಪುಸ್ತಕದ ಬಗ್ಗೆ ಬರೆದುಕೊಂಡಿದ್ದರು. ಹೆಸರೇ ಒಂದು ರೀತಿ ವಿಶಿಷ್ಟವಾಗಿದ್ದುದರಿಂದ 'ಪುಸ್ತಕ ಎಲ್ಲಿ ಸಿಗುತ್ತದೆ?' ಎಂದು ಕೇಳಿದೆ. ಸಧ್ಯಕ್ಕೆ ಇ-ಬುಕ್ ನಲ್ಲಿದೆ ಓದಿ ಅಂದರು, ನನಗೆ ಇ-ಬುಕ್ ಆಗಿ ಬರುವುದಿಲ್ಲ ಪೇಪರ್ ಬ್ಯಾಕ್ (ಪುಸ್ತಕ) ಇದ್ದರೆ ಹೇಳಿ, ಅಂದೆ. ಸಧ್ಯಕ್ಕೆ ಪ್ರಿಂಟ್ ಆಗಿಲ್ಲ, ಆದಾಗ ತಿಳಿಸುತ್ತೇನೆ ಅಂದವರು ಮೊನ್ನೆ ಕಳುಹಿಸಿದ್ದಾರೆ. ಇವತ್ತು ಮನೆಗೆ ಬಂದಾಗ ಪುಸ್ತಕ ಟೀಫಾಯಿಯ ಮೇಲಿತ್ತು. ಓದಲು ಪ್ರಾರಂಭಿಸಿದ್ದೇನೆ, ನಿಜಕ್ಕೂ ಅದ್ಭುತವಾದ ಕಂಟೆಂಟ್. 

ಪುಸ್ತಕದ ಬಗ್ಗೆ ಪೂರ್ತಿ ಓದಿದ ಮೇಲೆ ಬರೆಯುತ್ತೇನೆ. ಈಗ ಹೇಳ ಹೊರಟಿದ್ದು ಆ ವಿಚಾರವನ್ನಲ್ಲ. ಇತ್ತೀಚೆಗೆ ಗೆಳೆಯರೊಬ್ಬರೊಂದಿಗೆ ಮಾತನಾಡುತ್ತಾ "ನನಗೆ ಈ ಕಿಂಡಲ್, ಇ-ಬುಕ್ ಗಳಲ್ಲಿ ಓದಲಾಗುವುದಿಲ್ಲ ಮಾರಾಯ್ರೇ.. ಕೈಯ್ಯಲ್ಲಿ ಪುಸ್ತಕ ಹಿಡಿದು ಓದಿದರೆ ಮಾತ್ರ ಓದಿದ್ಹಂಗೆ ಅನಿಸುತ್ತೆ, ಹೀಗಾಗಿ ನನಗೆ ಪುಸ್ತಕವೇ ಹಿತ." ಅಂದಿದ್ದೆ. ಅದಕ್ಕವರು, ನೀವೇನ್ರೀ ಇನ್ನೂ ಯಾವ ಕಾಲದಲ್ಲಿದೀರೀ!? ಕನ್ನಡ ಸಾಹಿತ್ಯ ತಾಂತ್ರಿಕವಾಗಿ ಶ್ರೀಮಂತವಾಗಬೇಕೆಂದು ತೇಜಸ್ವಿಯವರೇ ಹೇಳಿದ್ದರು, ನೀವು ನೋಡಿದ್ರೆ ಅದೇ ಹಳೇ ಕತೆ ಹೇಳ್ತಿದೀರಲಾ... ಅಂದರು. 

ಇದೊಳ್ಳೆ ಕತೆಯಾಯಿತಲ್ಲ! ನಾನು ತಾಂತ್ರಿಕವಾಗಿ ಶ್ರೀಮಂತವಾಗಬಾರದು ಅಂತೆಲ್ಲಿ ಹೇಳಿದೆ!? 

ನನಗೆ ವೈಯಕ್ತಿಕವಾಗಿ, ಓದಲು ಪುಸ್ತಕವೇ ಇಷ್ಟ ಅಷ್ಟೇ ಅಂದುಕೊಂಡು ಮತ್ತೆ ಆ ವಾದವನ್ನು ಮುಂದುವರಿಸಲು ಹೋಗಲಿಲ್ಲ. 

ಕನ್ನಡ ಸಾಹಿತ್ಯವು ಹೊಸತನಗಳಿಗೆ ತೆರೆದುಕೊಳ್ಳಬೇಕೆಂದು ಆಶಿಸುವವರಲ್ಲಿ ನಾನ್ಯಾವತ್ತಿಗೂ ಮೊದಲಿಗ. ಹೊಸ ಹೊಸ ಸಾಧ್ಯತೆಗಳಲ್ಲಿ ಸಾಹಿತ್ಯವನ್ನು ಆಸ್ವಾದಿಸುವ ಓದುಗರು ಹೆಚ್ಚುತ್ತಿರುವಾಗ ನಾವು ಅವರದೇ ಆಯ್ಕೆಯಲ್ಲಿ ಸಾಹಿತ್ಯವನ್ನು ನೀಡಬೇಕು. ಪೇಪರ್ ಬ್ಯಾಕ್, ಇ-ಬುಕ್, ಆಡಿಯೋ ಬುಕ್ ಗಳು ವಿಶಿಷ್ಟ ಆಯ್ಕೆಗಳು. ಯಾರಿಗೆ ಯಾವುದು ಅಪ್ಯಾಯವೋ ಅವರದನ್ನು ಆಯ್ದುಕೊಳ್ಳುತ್ತಾರೆ. ಹಾಗೆಂದು, ತಂತ್ರಜ್ಞಾನ ಬೆಳೆಯುತ್ತಿದೆ, ಮುದ್ರಣ ವೆಚ್ಚ ಹೆಚ್ಚುತ್ತಿದೆ ಹಾಗಾಗಿ ಈ ಆಯ್ಕೆ ಹಳೆಯದಾಯಿತು ಇದನ್ಜು ನಿಲ್ಲಿಸಿ ಬಿಡೋಣ ಎಂದರೆ ನಿಜಕ್ಕೂ ಅದು ದಡ್ಡತನ. ನಿಲ್ಲಿಸಿದರೆ, ಪುಸ್ತಕದ ಆಯ್ಕೆಯನ್ನೇ ಸದಾ ಇಟ್ಟುಕೊಂಡಿರುವ ಓದುಗರ ವರ್ಗವನ್ನು ನಿಶ್ಚಿತವಾಗಿ ಕಳೆದುಕೊಳ್ಳಬೇಕಾದೀತು.! 

ಹೀಗಾಗಿ ಸಾಹಿತ್ಯವನ್ನು ಎಲ್ಲಾ ಆಯ್ಕೆಗಳಿಗೂ ತೆರೆದಿಡುವುದು ನಿಜಕ್ಕೂ ಬರಹಗಾರನ, ಪ್ರಕಾಶಕನ ಜಾಣತನ.  ಜೊತೆಗೆ ಎಲ್ಲಾ ಪ್ರಕಾರದ ಓದುಗರ ಆಯ್ಕೆಯನ್ನು ಪೂರೈಸುವ, ಗೌರವಿಸುವ ಪ್ರಬುದ್ಧತನ.

Comments

Popular posts from this blog

Coffee culture V/S Coffee industry

 Coffee blossoms in Brazil. An anti Nature cultivation.  ಕೆಲವು ವರ್ಷಗಳ ಹಿಂದೆ ನಮ್ಮ ಚಿಕ್ಕಮಗಳೂರಿನ ಸುತ್ತಮುತ್ತಲಿನಲ್ಲಿ ಕೆಲವರು ಬ್ರೆಜಿಲ್ ಮಾದರಿಯ ಕಾಫಿ ಬೆಳೆಯುತ್ತೇವೆಂದು ಓಡಾಡತೊಡಗಿದರು. ಬ್ರೆಜಿಲ್ ಮಾದರಿಯಲ್ಲಿ ಕಡಿಮೆ ಖರ್ಚು, ಕಾರ್ಮಿಕರಹಿತವಾಗಿ ಯಂತ್ರಗಳ ಮೂಲಕ ಕುಯ್ಲು ಹಾಗೂ ಕಂಡು ಕೇಳರಿಯದಷ್ಟು ಇಳುವರಿಯಂತೆ...! ಎಂಬೆಲ್ಲಾ ಮಾತುಗಳು ಹರಿದಾಡತೊಡಗಿದವು.  ಬ್ರೆಜಿಲ್ ಮಾದರಿಯೆಂದರೆ ಹೆಂಗೆ ಬೆಳೆಯುತ್ತಾರೆ !?  ಒಮ್ಮೆ ಹೋಗಿ ನೋಡಬೇಕೆಂಬ  ಕುತೂಹಲ ಪ್ರಾರಂಭವಾಯಿತು.  ಒಂದು ದಿನ ಕಳಸಕ್ಕೆ ಹೋಗುತ್ತಿರುವಾಗ ಬಾಳೆಹೊಳೆಯ ಬಳಿ ತುಂಬಾ ಹಳೆಯ ರೋಬಸ್ಟಾ ತೋಟವೊಂದನ್ನು ಮರಗಳ ಸಮೇತ ಕಡಿದು ಬಟಾಬಯಲಾಗಿಸಿ ಸಾಲು ಸಾಲು ಪಾತಿಗಳಂತೆ   ಮಾಡಿ ಒಂದರ ಪಕ್ಕ ಒಂದರಂತೆ ಗಿಡಗಳನ್ನು ನೆಟ್ಟು ಹನಿ ನಿರಾವರಿ ಪೈಪುಗಳನ್ನು ಎಳೆಯುತ್ತಿದ್ದರು. ನೋಡಲು ಒಂದು ನಮೂನೆಯ ಟೀ ತೋಟದ ಮಾದರಿಯಲ್ಲಿತ್ತು. ಚಹಾ ತೋಟದಲ್ಲಾದರೂ ನಡುವೆ ಅಲ್ಲಲ್ಲಿ ಮರಗಳಿರುತ್ತವೆ ಇಲ್ಲಿ ಒಂದೇ ಒಂದು ಮರವನ್ನೂ ಬಿಡದಂತೆ ಕಡಿದುಹಾಕಿದ್ದರು.! ತೋಟದ ಸಮೀಪದಲ್ಲಿದ್ದ ಅಂಗಡಿಯೊಂದರಲ್ಲಿ, ಇದೇನು ಬೆಳೆಸುತ್ತಿದ್ದಾರೆ ? ಎಂದು ವಿಚಾರಿಸಿದೆ. 'ಎಂತದಾ ಬ್ರೆಜಿಲ್ ಕಾಪಿ ಬೆಳಿತಾರಂತೆ ಮಾರ್ರೆ ಭಯಂಕರ ಕಾಪಿ ಬಿಡ್ತದಂತೆ ಇನ್ಮೇಲೆ ಮಿಸಿನ್ನಲ್ಲಿ ಹಣ್ ಕುಯ್ಯದಂತೆ' ಎಂದರು. ಕೆಲವೇ ದಿನಗಳ ಹಿಂದೆ ಯಾವ ಬ್ರೆಜಿಲ್ ಮಾದರಿಯನ್ನು ನೋಡಬೇಕೆ...
 ಬೆಂಗಳೂರಿಗೆ ಹೊರಡುವ ಬಹುತೇಕ ನಿರುದ್ಯೋಗಿಗಳ ಚಿಂತೆ ಕೆಲಸ ಸಿಗುತ್ತದಾ ?  ಎನ್ನುವುದಕ್ಕಿಂತ ಉಳಿಯಲು ಕೊಠಡಿ ಸಿಗುತ್ತದಾ ? ಎನ್ನುವುದು. ಕಾರಣ ಪುಡಿಗಾಸು ಇಟ್ಟುಕೊಂಡು ಹೊರಡುವ ಹುಡುಗರು (ಬಹುತೇಕ ಹುಡುಗಿಯರು ಅದರಲ್ಲಿ ಜಾಣೆಯರು. ಕೆಲಸ , ಕೋಣೆಯನ್ನು  ಖಚಿತ ಪಡಿಸಿಕೊಂಡೇ ಹೊರಡುತ್ತಾರೆ.! ) ಸ್ವಂತದ ಕೋಣೆ ಬಾಡಿಗೆ ಪಡೆಯುವಷ್ಟು ಶಕ್ತಿಯಿರುವುದಿಲ್ಲ. ಹಾಗಾಗಿ ಬೆಂಗಳೂರಿಗೆ ಕೆಲಸ ಹುಡುಕಿ ಹೊರಡುವುದು ಒಂದು ರೀತಿಯ ಅನಿಶ್ಚಿತತೆಯ ಪ್ರಯಾಣ. ಇನ್ನು ಈ ಪ್ರಾಣಿ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದೆ ಎಂಬ ಮಾಹಿತಿ ಮೊದಲೇ ಬೆಂಗಳೂರಿಗೆ ಹೋಗಿ ಸೇರಿಕೊಂಡವರಿಗೆ ತಿಳಿದರೆ ಅವರು ಸತ್ತರೂ ಫೋನ್ ರಿಸೀವ್ ಮಾಡುವುದಿಲ್ಲ.  ಇನ್ನು ಕೆಲವರು ಕರೆ ಮಾಡಿದಾಗಲೆಲ್ಲಾ ರೂಮಿಗೇ ಬರದೇ ಹಗಲೂ ರಾತ್ರಿ ಡ್ಯೂಟಿ ಮಾಡುತ್ತಲೇ ಇರುತ್ತಾರೆ.!  ಬಹುತೇಕ ಹುಡುಗರಿಗೆ ಸುಳ್ಳಿನ ಸರಪಳಿ ಅನಿವಾರ್ಯವಾಗಿದ್ದರೆ ಇನ್ನು ಕೆಲವರಿಗೆ ಊರಿನ ಮತ್ತೊಂದು ಮಿಕ ಬೆಂಗಳೂರು ಸೇರಿ ಉದ್ದಾರಾಗುವುದು ಹೊಟ್ಟೆ ಉರಿಯ ಮ್ಯಾಟರ್ರು.  ಬೆಂಗಳೂರಿಗೆ ಹೋದ ಹೊಸತು. ಹೋಗುವ ಮೊದಲು ನಾಗಮಂಗಲ ಕಡೆಯ ಗೆಳೆಯನೊಬ್ಬನ ಕೋಣೆಯನ್ನು ಖಚಿತ ಪಡಿಸಿಕೊಂಡಿದ್ದೆ. 'ಅಯ್ಯೋ ಬಾ ಮಗಾ ನಾನಿದೀನಿ...' ಎಂದು ಥೇಟ್ ಕೃಷ್ಣ ಪರಮಾತ್ಮನ ಶೈಲಿಯಲ್ಲಿ ಅಭಯ ನೀಡಿದ್ದ. ಹೋಗಿ  ಇಳಿದ ನಂತರ ಆ ದರವೇಸಿಗೆ ಅದೇನಾಯ್ತೋ ಮುಖ ಗಂಟು ಹಾಕಿಕೊಂಡೇ ಸುಂಕದ ಕಟ್ಟೆಯಾಚೆಗಿನ ಅವನ ಮನ...

ಕೀಟ ಸಾಮ್ರಾಜ್ಯ ಹಾಗೂ ಆಧುನಿಕ ಕೃಷಿ

 ಮೊನ್ನೆ ಸಹಜ ಕೃಷಿ ಪದ್ಧತಿಯಲ್ಲಿ ಅಡಿಕೆ ಬೆಳೆಯುತ್ತಿರುವ ಶ್ರೀಯುತ. ಚಂದ್ರಶೇಖರ್ ಅವರ ತೋಟಕ್ಕೆ ಹೋಗಿದ್ದೆ. ಜೀವಾಮೃತವನ್ನಷ್ಟೇ ಬಳಸುತ್ತಿರುವ ಅವರು ಹನ್ನೆರಡು ವರ್ಷಗಳಿಂದ ಮಣ್ಣಿಗೆ ರಾಸಾಯನಿಕ ಗೊಬ್ಬರವನ್ನೇ ಸೋಕಿಸಿಲ್ಲವಂತೆ. ಆದರೂ ಸಹ ಇತರೇ ಬೆಳೆಗಾರರಿಗಿಂತ 20-30% ಹೆಚ್ಚು ಫಸಲು ತೆಗೆಯುತ್ತಿದ್ದಾರಂತೆ. ಅಡಿಕೆಯ ನಡುವೆ  ಬೆಳೆದಿರುವ ಎರಡು ವರ್ಷ ವಯಸ್ಸಿನ ರೋಬಸ್ಟಾ ಕಾಫಿ ಗಿಡಗಳು ನಾಲ್ಕು ವರ್ಷದ ಗಿಡಗಳಂತೆ ಬೆಳೆದಿವೆ.  ಕಳೆ, ಕೀಟ ನಾಶಕಗಳನ್ನು ಬಳಸುವುದರಿಂದ ಕೇವಲ‌ ಕಳೆಯನ್ನಷ್ಟೇ ಅಲ್ಲ, ಕೀಟ ಜಗತ್ತನ್ನೇ ಸರ್ವನಾಶ ಮಾಡುತ್ತಿದ್ದೇವೆನ್ನುವ ಕಿಂಚಿತ್ತು ಅರಿವಿಲ್ಲದ ರೈತರ ಬಗ್ಗೆ ಅವರು ಆತಂಕಗೊಂಡರು.  ನಾನು ಬರೆದಿರುವುದನ್ನು ಓದುವ ಕೃಷಿಕರು ಒಂದು ಕ್ಷಣ ಆಲೋಚಿಸಿ ನೋಡಿ. ರಾಸಾಯನಿಕ ವಿಷವನ್ನು ಬಳಸಿ ನಾವು ಕೊಲ್ಲುತ್ತಿರುವುದಾದರೂ ಯಾವುದನ್ನು!?  ಕಳೆಗೆ ಸಿಂಪಡಿಸುವ ರಾಸಾಯನಿಕವು ಕಳೆಯಿಂದ ನೆಲಕ್ಕಿಳಿದು ಕಣ್ಣಿಗೆ ಕಾಣದ, ಜೀವ ವೈವಿಧ್ಯದ ಅಮೂಲ್ಯ ಭಾಗವಾದ ಲಕ್ಷಾಂತರ, ಕೋಟ್ಯಾಂತರ ಕ್ರಿಮಿ, ಕೀಟಗಳನ್ನು ಅನಾಮತ್ತು ಕೊಲ್ಲುತ್ತಿರುವುದರ ಬಗ್ಗೆ ಔಷಧಿಯ ಹೆಸರಿನಲ್ಲಿ ಹಣ್ಣು, ಸೊಪ್ಪು, ತರಕಾರಿಯಿಂದ್ಹಿಡಿದು ತಿನ್ನುವ ಅನ್ನಕ್ಕೂ ವಿಷವಿಕ್ಕುತ್ತಿರುವ ನಾವು ಯೋಚಿಸಿದ್ದೇವೆಯಾ ? ಯೋಚಿಸುತ್ತೇವೆಯಾ ?  ನಾವು ಔಷಧವೆಂದು ಬಳಸುತ್ತಿರುವ ರಾಸಾಯನಿಕವು ಔಷಧಿಯೇ ಆಗಿದ್ದಿದ್ದಲ್ಲಿ ನಮ್ಮ ತೋಟ, ನಮ್ಮ ಹೊ...