Skip to main content

Posts

Showing posts from March, 2020

Nature Engineering

ಈ ಮಳೆಗಾಲದಲ್ಲಿ ನಮ್ಮೂರಿನ ಗುಡ್ಡ ಕುಸಿದ ಜಾಗಗಳಲ್ಲಿ ಓಡಾಡುವಾಗ ಒಂದು ಕಡೆ ದೊಡ್ಡ ವಿಸ್ಮಯ ಎನಿಸುವಂಥದ್ದು ಕಂಡಿತು. ಕಾಫಿ ತೋಟದ ಪುಟ್ಟ ಕಣಿವೆಯೊಂದು ಗುಡ್ಡದ ಮಣ್ಣು , ನೀರು ಕೊಚ್ಚಿ ಬಂದ ಪರಿಣಾಮ ಐವತ್ತರವತ್ತು ಅಡಿ ಅಗಲದಷ್ಟು ದೊಡ್ಡ ಹೊಳೆಯಾಗಿ ಮಾರ್ಪಟ್ಟಿತ್ತು.! ಮಣ್ಣಿನಡಿಯಿಂದ ದೊಡ್ಡ ಗಾತ್ರದ ಕಲ್ಲುಗಳು ಉದ್ಭವವಾಗಿದ್ದವು. ಅದೊಂದು ಹೊಸತಾಗಿ ಹುಟ್ಟಿಕೊಂಡ ಹೊಳೆ. ಅದನ್ನು ನೋಡಿದಾಗ ನನಗನ್ನಿಸಿದ್ದು ಅಲ್ಲಿದ್ದಿರಬಹುದಾದ ಹೊಳೆಯೊಂದು ಹಿಂದ್ಯಾವತ್ತೋ ನಿರಂತರವಾಗಿ ಮುಚ್ಚುತ್ತಾ ಹೋಗಿ ಕಡೆಗೆ ಮಾಯವೇ ಆದ ಪರಿಣಾಮ ಅಥವಾ ಹೊಳೆಯನ್ನೂ ಒತ್ತುವರಿ ಮಾಡಿ ತೋಟ ಮಾಡಿದ ಪರಿಣಾಮ ಆ ಮಣ್ಣಿನಡಿಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಹೊಳೆಯು ತನ್ನ ಸಮಯ ಬಂದಾಗ ಸ್ಪೋಟಿಸಿಕೊಂಡು ತನ್ನ ಜಾಗವನ್ನು ತೆರವು ಮಾಡಿಕೊಂಡಿತೇನೋ... ಇದೇ Nature engineering! ಪ್ರಕೃತಿ ತನ್ನನ್ನೇ ತಾನು ಶುದ್ದೀಕರಿಸಿಕೊಳ್ಳುವ ಪರಿ.! ಅಥವಾ ಸಮತೋಲನ ಮಾಡಿಕೊಳ್ಳುವ ರೀತಿ. ಬರ, ನೆರೆ, ಭೂಕಂಪ, ಕಾಡ್ಗಿಚ್ಚು ಎಲ್ಲವೂ ಪ್ರಕೃತಿಯ ಇಚ್ಛೆಗನುಸಾರವಾಗಿಯೇ ನಡೆಯುವಂಥದ್ದು. ತಾನು ಸಾಕುತ್ತಿರುವ ಸಕಲ ಜೀವರಾಶಿಗಳಲ್ಲಿ ಎಲ್ಲೋ ಸಮತೋಲನ ತಪ್ಪುತ್ತಿದೆ ಎಂದು ಅರಿವಾದ ತಕ್ಷಣ ಪ್ರಕೃತಿ ಮುಲಾಜಿಲ್ಲದೇ ಜರಡಿ ಹಿಡಿದು ಕೆಳಗೆ ಉದುರಿದ ಜೀವಿಗಳನ್ನು ಎತ್ತಿ ಹೊರಗೆಸೆಯುತ್ತದೆ. ಉದುರದೇ ಉಳಿದುಕೊಂಡವರು ಮುಂದಿನ filtration ಪ್ರಕಿಯೆ ನಡೆಯುವ ತನಕ ಸೇಫ್.! ಮುಂದಿನ ಕಾರ್ಯಾಚರ...

ಪ್ರೀತಿಯೆಂದರೆ....

ನಾನು ಪ್ರೀತಿಯ ಬಗ್ಗೆ ಏನಾದರೂ ಬರೆದರೆ ನನ್ನ ಬಗ್ಗೆ ಗೊತ್ತಿರುವ ಕೆಲವರು ಭಯಂಕರವಾಗಿ ನಕ್ಕುಬಿಡುತ್ತಾರೆ. ಕಾರಣ ನಾನದೆಷ್ಟು ಒರಟು ಮುಂಡೇದು ಎಂದು ಅವರಿಗೆ ಗೊತ್ತು. ನನ್ನ ಆತ್ಮಬಂಧುವೊಬ್ಬರು feeling less ಕತ್ತೆ ಎಂದೇ ಕರೆಯುತ್ತಾರೆ.  ನಾನೋ ಬಂಡ ನನ್ಮಗ ಅವರ ಬೈಗುಳವೆಲ್ಲಾ ನನಗೆ ತಾಗುವುದಿಲ್ಲ ಬಿಡಿ.😁 ಅದೆಲ್ಲಾ ಅತ್ಲಾಗಿರಲಿ...  ನೀವು ಗಮನಿಸಿ ನೋಡಿ ಅಥವಾ ಅನುಭವಿಸಿ ನೋಡಿ.( ಕೆಲವರು ಅನುಭವಿಸುತ್ತಲೂ ಇರಬಹುದು.!) ನಿಜವಾದ ಪ್ರೀತಿ ಹುಟ್ಟುವುದು ಕೇವಲ ಒಬ್ಬಳ/ನ ಮೇಲೆ ಮಾತ್ರ. ಮತ್ತು ಆಳವಾಗಿ ಪ್ರೀತಿಸಲು ಸಾಧ್ಯವಾಗುವುದು ಕೇವಲ‌ ಒಂದು ಜೀವವನ್ನು ಮಾತ್ರ. ಒಂದೇಸಲಕ್ಕೆ ಇಬ್ಬರನ್ನು ಪ್ರೀತಿಸುತ್ತೇನೆ, ಮೂರು ಮತ್ತೊಬ್ಬರನ್ನು ಪ್ರೀತಿಸುತ್ತೇನೆ ಅಂದುಕೊಳ್ಳುವುದು ಮುಠಾಳತನ ಅಥವಾ ಆತ್ಮವಂಚನೆ. ಎರಡನೆಯವರನ್ನು ನೀವು ಮೋಹಿಸಬಹುದಷ್ಟೇ ಅಥವಾ ಕಾಮಿಸಬಹುದಷ್ಟೇ ಅದನ್ನೇ ಪ್ರೀತಿಯೆಂದು ಭ್ರಮಿಸಬಹುದಷ್ಟೇ. ಅದರಾಚೆಗೆ ನೀವು ಉಸ್ಸಪ್ಪಾ ಇವಳೇ/ನೇ ನನ್ನ ಜೀವ ಎಂದು ಪ್ರೀತಿಸಲು ಸಾಧ್ಯವೇ ಇಲ್ಲ. ಹಾಗೆ ಪ್ರೀತಿಸುತ್ತೇನೆ ಎಂದು ಚಾಲೆಂಜುಗೀಲೆಂಜು ಹಾಕಿದಿರೆಂದರೆ ನೀವು ಮೊದಲಿನ ಪ್ರೀತಿಗೆ ದ್ರೋಹವೆಸಗುತ್ತಿದ್ದೀರೆಂದಷ್ಟೇ ಅರ್ಥ.  ದೇಹ ಹತ್ತಾರು ಜನರ ಭಾವನೆಗಳಿಗೆ, ಕ್ರಿಯೆಗಳಿಗೆ, ಆಮಿಷಕ್ಕೆ, ಆಸೆಗೆ, ಅವತಾರಕ್ಕೆ ಬಹುಬೇಗನೆ ಸ್ಪಂದಿಸಿಬಿಡುತ್ತದೆ. ಆದರೆ ಮನಸ್ಸು ಹಾಗಲ್ಲ, ಅದು ಒಬ್ಬರಿಗೆ ಮಾತ್ರ ಸ್ಪಂದಿಸುತ್ತದೆ ಮತ್ತು ...

ಇದು ರಣಹದ್ದಿನ ವ್ಯಥೆ...

ಊರಿನಲ್ಲಿದ್ದಾಗ ಮನೆಯೆದುರು ವಿಶಾಲವಾದ ಗೋಮಾಳವಿತ್ತು. ಹಗಲೂ ರಾತ್ರಿ ಜಾನುವಾರುಗಳ ಹಿಂಡು ಮೇಯುತ್ತಿರುತ್ತಿದ್ದವು. ಒಮ್ಮೆ ದನಗಳಿಗೆ ಅದೇನೋ ಖಾಯಿಲೆ ವಕ್ಕರಿಸಿಕೊಂಡಿತು( ಬಹುಶಃ ಕಾಲುಬಾಯಿ ರೋಗವಿರಬೇಕು) ಪ್ರತೀ ಮನೆಯಲ್ಲೂ ದನಗಳು ಒಂದರ ಹಿಂದೊಂದರಂತೆ ಸಾಯತೊಡಗಿದವು. ಸತ್ತ ದನಗಳನ್ನು ಹುಗಿಯುವವಷ್ಟು ವ್ಯವಧಾನವಿಲ್ಲದ ಜನ ಅವುಗಳನ್ನು ಹೊತ್ತು ತಂದು ಗೋಮಾಳದ ಮೂಲೆಯಲ್ಲಿದ್ದ ಸ್ಮಶಾನದಲ್ಲಿ ದೊಡ್ಡ ಮರವೊಂದರ ಕೆಳಗೆ ಎಸೆಯತೊಡಗಿದರು. ಒಂದಾ...! ಎರಡಾ...! ಹತ್ತಾರು ದನಗಳ ಕಳೇಬರಗಳು ಕೊಳೆತು ನಾರತೊಡಗಿದವು. ಆ ದಾರಿಯಲ್ಲಿ ಓಡಾಡುವುದೇ ದುಸ್ತರವಾಯಿತು. ಒಂದು ಬೆಳಿಗ್ಗೆ ಆ ಮಾರ್ಗವಾಗಿ ಹೋಗುತ್ತಿದ್ದ ಕೆಲವರು ಗುಂಪುಗೂಡಿ ದನಗಳನ್ನು ಎಸೆದಿದ್ದ ಕಡೆಗೆ ಕುತೂಹಲದಿಂದ ನೋಡತೊಡಗಿದರು. ಗುಂಪಿನೊಳಗೆ ನಾವೂ ಸೇರಿಕೊಂಡೆವು. ಕಳೇಬರಗಳ ಸುತ್ತ ನಾವು ಅಲ್ಲಿಯವರೆಗೂ ನೋಡಿಯೇ ಇರದ ದೊಡ್ಡ ದೊಡ್ಡ ಪಕ್ಷಿಗಳು ಸುತ್ತುವರಿದು ಕೊಳೆತ ಮಾಂಸವನ್ನು ತಮ್ಮ ದೊಡ್ಡ ಗಾತ್ರದ ಕೊಕ್ಕಿನಿಂದ ಕುಕ್ಕಿ ತಿನ್ನತೊಡಗಿದ್ದವು. ಗುಂಪಿನಲ್ಲಿದ್ದ ಯಾರೋ ಅಗ್ಗಗ್ಗಾ... ಎಂದು ಬಾಯಿ ಮಾಡಿದರು. ಒಮ್ಮೆಲೇ ಹತ್ತಾರು ಪಕ್ಷಿಗಳು ಛತ್ರಿಯಂತಹ ರೆಕ್ಕೆಗಳನ್ನು ಹರಡಿಕೊಂಡು ನಭಕ್ಕೆ ನೆಗೆದವು. ಅಬ್ಬಾ!! ಅದೆಂಥಾ ರೆಕ್ಕೆಗಳು.!! ಆ ಕಾಲಕ್ಕೆ ಅಷ್ಟು ದೊಡ್ಡ ಪಕ್ಷಿಯನ್ನೇ ಕಂಡಿರದ ನಮಗೆ ಇವೇನು ಹಕ್ಕಿಗಳೋ!? ಹಕ್ಕಿಗಳ ರೂಪದ ರಾಕ್ಷಸರೋ...!? ಎನಿಸಿಬಿಟ್ಟಿತು. ಅಂಥಾ ಗಾತ್ರ.! ಅವತ್ತಿಗೆ...

ಮೂಲಿಕೆಯೆಂಬ ಮಂತ್ರದಂಡ

ಭಾರತ ನಾಟಿ ವೈದ್ಯಕ್ಕೆ ಜಗತ್ತಿಗೇ ಪ್ರಸಿದ್ದಿ. ನಮ್ಮ ಪೂರ್ವಿಕರು ಹಲವಾರು ಚಿಕ್ಕ, ದೊಡ್ಡ ಖಾಯಿಲೆಗಳಿಗೆ ತಮ್ಮ ಪರಿಸರದಲ್ಲೇ ಔಷಧಿಗಳನ್ನು ಕಂಡುಕೊಂಡಿದ್ದರು. ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ, ದುಬಾರಿ ಖರ್ಚು ಮಾಡಿದರೂ ಗುಣವಾಗದ ಕೆಲವು ಖಾಯಿಲೆಗಳು ನಾಟೀ ಪದ್ದತಿಯಲ್ಲಿ ಖರ್ಚೇ ಇಲ್ಲದೇ ಗಿಡಮೂಲಿಕೆಗಳಿಂದ ಗುಣವಾಗಿಬಿಡುತ್ತವೆ.! ವೈದ್ಯಲೋಕಕ್ಕೇ ಸವಾಲಾಗುವ ಕೆಲವು ಖಾಯಿಲೆಗಳು ಗಿಡಮೂಲಿಕೆಗಳೆದುರು ಬಾಲ ಮುದುರಿಕೊಂಡು ಓಡಿ ಹೋಗಿಬಿಡುತ್ತವೆ. ಇದೇ ನಮ್ಮ ಆಯುರ್ವೇದದ, ನಾಟೀ ವೈದ್ಯ ಪದ್ದತಿಯ ಶಕ್ತಿ. ನಾನು ಕಣ್ಣಾರೆ ಕಂಡ ಅಂತಹ ನಾಟಿ ವೈದ್ಯರೊಬ್ಬರ ಪರಿಚಯವನ್ನು ನಿಮಗೆ ನೀಡುತ್ತೇನೆ. ಅಗತ್ಯವಿರುವವರು ಬಳಸಿಕೊಳ್ಳಬಹುದು, ಮತ್ತೊಂದಷ್ಟು ಜನರೊಂದಿಗೆ ಮಾಹಿತಿಯನ್ನು  ಹಂಚಿಕೊಳ್ಳಬಹುದು. ಕೆಲವು ವರ್ಷಗಳ ಕೆಳಗೆ ನಮ್ಮ ಹುಡುಗ ನವೀನನಿಗೆ ಜಾಂಡೀಸ್ ಆಗಿತ್ತು. ಆಸ್ಪತ್ರೆಯ ಔಷಧಿಗಳು ಕಾಯಿಲೆಯನ್ನು ವಾಸಿಮಾಡದೇ ಉಲ್ಬಣಗೊಂಡಾಗ ಯಾರೋ ಈ ಮೊದಲೇ ಔಷಧಿ ತೆಗೆದುಕೊಂಡು ಸಂಪೂರ್ಣ ಗುಣ ಹೊಂದಿದ್ದವರೊಬ್ಬರು ಕೊಟ್ಟ ವಿಳಾಸ ಹಿಡಿದು ನಾಟಿ ವೈದ್ಯ ರವಿ ಹೆಗ್ಗಡೆಯವರ ಮನೆ ಹುಡುಕುತ್ತಾ ಹೊರಟೆವು. ಉಡುಪಿಯ ಭ್ರಹ್ಮಾವರದಿಂದ ಇಪ್ಪತ್ತೈದು-ಮೂವತ್ತು ಕಿಲೋಮೀಟರು ದೂರದ ಊರದು. ಶ್ರೀ ಕ್ಷೇತ್ರ ಮಂದಾರ್ತಿಯನ್ನು ದಾಟಿ ಹೋಗಬೇಕು. ಹಿಲಿಯಾಣ ಅನ್ನೋ ಊರಿನ ಗೋಳಿಯಂಗಡಿ ಎಂಬಲ್ಲಿಗೆ ಹೋಗಬೇಕಿತ್ತು. ಹಿಲಿಯಾಣದಲ್ಲಿಳಿದು ಆಟೊದಲ್ಲಿ ಆ ಮನೆಯ ಹತ್ತಿರ ಹೋಗಿಳ...

ದೇವರೆಂದರೆ ನಂಬಿಕೆ... ನಂಬಿಕೆಯೇ ದೇವರು.

ಮಲೆನಾಡಿನಲ್ಲಿ ಇತ್ತೀಚಿನ ತನಕವೂ ನಂಬಿಕೆಯೊಂದಿತ್ತು  (ಈಗಲೂ ಇರಬಹುದು). ಕಾಕತಾಳೀಯವೋ, ಪ್ರಕೃತಿಯ  ನಿಗೂಢತೆಯೋ ಅಂಗಳದಲ್ಲಿ  ಆಡುತ್ತಿರುತ್ತಿದ್ದ ಪುಟ್ಟ ಕರುಗಳು ಕೆಲಹೊತ್ತು ಕಾಣೆಯಾಗುತ್ತಿದ್ದವು. ಸುತ್ತ-ಮುತ್ತಲಿನೆಲ್ಲಿ ಹುಡುಕಿದರೂ ಕರುವಿನ ಸುಳಿವು ಸಿಗುತ್ತಿರಲಿಲ್ಲ. ಆ ಕ್ಷಣಕ್ಕೆ ಅಮ್ಮನೋ, ಅಜ್ಜಿಯೋ ' ಕರಿಗೆ ಏನೂ ಆಗ್ದಂಗೆ ವಾಪಸ್ ಬಂದ್ರೆ ನಿಂಗೊಂದ್ ಹಣ್ಕಾಯಿ ಕೊಡ್ತಿನಿ, ಕೋಳಿ ಕೊಡ್ತಿನಿ' ಎಂದು ದೈವಕ್ಕೆ ಕಾಣಿಕೆ ಕಟ್ಟುತ್ತಿದ್ದರು. ಕಾಣಿಕೆ ಕಟ್ಟಿದ ಕೆಲಹೊತ್ತಿನಲ್ಲೇ ಕರು ಅದೆಲ್ಲಿಂದಲೋ ಚೆಂಗನೆ ನೆಗೆದು ಬರುತ್ತಿತ್ತು.! 'ಕರನ ದಯ್ಯ ಅಡಗ್ಸಿಡ್ತದೆ' ಎಂಬುದು ಮಲೆನಾಡಿನಲ್ಲಿ ಬಹು ಪ್ರಚಲಿತದ ಮಾತು. ನಾನಿಲ್ಲಿ ಕರುವನ್ನು ದೈವವೇ ಹುಡುಕಿಕೊಟ್ಟಿತು ಅಂತಲೋ ಅಥವಾ ಇವೆಲ್ಲಾ ಜನರ ಮೂಢ ನಂಬಿಕೆಯಷ್ಟೇ ಅಂತಲೋ ತರ್ಕಿಸುತ್ತಿಲ್ಲ ಅಥವಾ ಷರಾ ಬರೆಯುತ್ತಿಲ್ಲ. ಜನಪದವನ್ನು, ಜನರ ನಂಬಿಕೆಗಳನ್ನು ನಾನು ಎಲ್ಲದಕ್ಕಿಂತಾ ಹೆಚ್ಚು ಪ್ರೀತಿಸುತ್ತೇನೆ, ಗೌರವಿಸುತ್ತೇನೆ.  ಚೌಡಿ, ದಯ್ಯ, ಜಟ್ಟಿಗ, ಹೊಟ್ಟು ದಯ್ಯ ಇವೆಲ್ಲಾ ಮಲೆನಾಡಿನಲ್ಲಿ ಸದಾ ಕಾಲ ತೋಟ, ಗದ್ದೆ ಕಾಯುವ, ಜಾನುವಾರುಗಳನ್ನು ರಕ್ಷಿಸುವ ದೈವಗಳು. ಅವುಗಳಿಗೆ ವರ್ಷಕ್ಕೊಮ್ಮೆ  ಎರಡು, ನಾಲ್ಕು ಕಾಲಿನ ಆಹಾರ ನೀಡಲೇಬೇಕು. ಅದರಲ್ಲೂ ಬಹುತೇಕ ದೈವಗಳಿಗೆ ಹಂದಿಯೇ ಪ್ರಿಯವಾದ ಆಹಾರ. ' ಇವತ್ತು ಚೌಡಿಗೆ ಇಕ್ತಾರಂತೆ...' ಎಂಬ ಸುದ್ದಿ ಕಿವಿಗೆ ಬಿದ್ದ...