Skip to main content

Posts

Showing posts from January, 2021
 ಇವತ್ತು ನಮ್ಮ ಊರಿನ ಬಳಿಯ ಹುಡುಗನೊಬ್ಬನ ಆತ್ಮಹತ್ಯೆಯ‌ ಸುದ್ದಿ ಕೇಳಿ ಮನಸ್ಸಿಗೆ ಪಿಚ್ಚೆನಿಸಿತು. ಫೋಟೊ ನೋಡಿದರೆ, ಹುಡುಗನ ವಯಸ್ಸು ಇಪ್ಪತ್ತೋ ಇಪ್ಪತ್ತೆರಡೋ ಇರಬಹುದೇನೋ... ಈ ವಯಸ್ಸಿನಲ್ಲಿ ಕೈಯ್ಯಾರೆ ಜೀವ ಕಳೆದುಕೊಳ್ಳುವಂತಹ ಕಷ್ಟ, ಸಮಸ್ಯೆ ಏನಿದ್ದೀತು.!? ಸಂಸಾರದ ಹೊರೆಯಾ ?, ವ್ಯಾಪಾರ ನಷ್ಟವಾ ? ತೀರಿಸಲಾಗದಷ್ಟು ಸಾಲವಾ ? ಉದ್ಯೋಗ ನಷ್ಟ ? ಏನಿದ್ದೀತು... ?  ಹೆಚ್ಚೆಂದರೆ ಪರೀಕ್ಷೆಯಲ್ಲಿ ಫೇಲು, ಮನೆಯಲ್ಲಿ ಬೈಗುಳ, ಕೈ ಕೊಟ್ಟ ಹುಡುಗಿಯ infatuation( ಅದನ್ನೇಹುಡುಗರು ಅಮರ ಪ್ರೇಮವೆಂದು ಭ್ರಮಿಸುತ್ತಾರೆ), ಎಲ್ಲದಕ್ಕಿಂತಾ ದೊಡ್ಡದು ತಾಳ್ಮೆಯೇ ಇರದ ದುಡುಕುತನ ಹಾಗೂ ಮುಂಗೋಪ. ಇವಿಷ್ಟೇ... ಇದರಲ್ಲೊಂದು ಸಮಸ್ಯೆ ಹುಡುಗ/ಹುಡುಗಿಯರನ್ನು ಬೆಟ್ಟದಂತೆ ಕಾಡಿ ಕೊಂದುಬಿಡುತ್ತದೆ.  ಇವಕ್ಕಿಂತಾ ಹೆಚ್ಚಿನದ್ದು ಒಂದೇ ಒಂದು ಸಮಸ್ಯೆ( ಅಸಲಿಗೆ ಇವು ಸಮಸ್ಯೆಗಳೇ ಅಲ್ಲ!) ಈ ವಯಸ್ಸಿನವರಿಗಿದ್ದರೆ ಕೇಳಿ.  ಇವತ್ತಿನ ಸಾಮಾಜಿಕ ವ್ಯವಸ್ಥೆ ಯುವ ಮನಸ್ಸುಗಳನ್ನು ಹೇಗೆ ದುರ್ಬಲವನ್ನಾಗಿಸಿದೆ ಎಂಬುದಕ್ಕೆ ಇಂಥಾ ಉದಾಹರಣೆಗಳು ದಿನಂಪ್ರತಿ ನಮಗೆ ದೊರಕುತ್ತಲೇ ಇರುತ್ತವೆ.  ಗಮನಿಸಿ ನೋಡಿ, ಇಂದಿನ ಹುಡುಗರದ್ದು ಎಲ್ಲವೂ ಅತಿ ವೇಗ, ಅತಿರೇಕ, ಅತಿ ಭಾವುಕ. ತಾವು ಬಯಸಿದ್ದೆಲ್ಲವೂ ಅಂದುಕೊಂಡ  ಸಮಯದೊಳಗೆ ದಕ್ಕಿಬಿಡಬೇಕೆಂಬ ಕಾತರ. ತಾವು ಮಾಡುತ್ತಿರುವುದೇ ಸರಿ ಹಾಗೂ ಇದು ಮಾತ್ರ ಸರಿ ಎಂಬ ಹುಂಬತನ. ಸಣ್ಣ ಸೋಲನ್ನೂ ...
 ಮನುಷ್ಯ ಪ್ರತೀ ಬಾರಿ ಸೋತಾಗಲೂ ಕನಿಷ್ಟ ಐದು ವರ್ಷ ಹಿಂದಕ್ಕೆ ಹೋಗಿಬಿಡುತ್ತಾನೆ. ಪ್ರತೀ ಸೋಲು ದೈಹಿಕವಾಗಿ ವೃದ್ದಾಪ್ಯದೆಡೆಗೆ ದೂಡಿದರೆ, ಮಾನಸಿಕವಾಗಿ ಕುಬ್ಜನನ್ನಾಗಿಸುತ್ತದೆ.  ಸೋತ ವ್ಯಕ್ತಿಯ ಸುತ್ತಲಿನ ಗೆಳೆಯರು, ಸಮವಯಸ್ಕರು, ಕಿರಿಯರು ಆತನನ್ನು ಹಿಂದಕ್ಕೆ ಸರಿಸಿ ಹಲವು ಮೈಲಿಗಳಷ್ಟು ದೂರ ಮುಂದೆ ಹೋಗಿಬಿಟ್ಟಿರುತ್ತಾರೆ. ಆಗಲೇ ಮನುಷ್ಯ ಆಮೆಯಂತಾಗಿಬಿಡುವುದು... ಸೋಲಿಗೆ ಹೆದರಿ,  ಸಮಾಜಕ್ಕೆ ಅಂಜಿ, ಯಾರನ್ನಾದರೂ ಎದುರುಗೊಳ್ಳುವ ಅವಕಾಶವನ್ನು ತಪ್ಪಿಸಲೆತ್ನಿಸುತ್ತಾ ಏಕಾಂತದೊಳಗೆ ತಲೆ ಹುದುಗಿಸಿಕೊಂಡುಬಿಡುತ್ತಾನೆ...  ಇತ್ತ ದರವೇಸಿ ಸೋಲು ಕೂಡಾ ಸೋತವನ ಮೇಲೆಯೇ ಮತ್ತೆ ಮತ್ತೆ ದಾಳಿಯಿಡತೊಡಗುತ್ತದೆ. ಹಣಕಾಸು, ಉದ್ಯೋಗ, ವ್ಯವಹಾರ, ಪ್ರೀತಿ, ಮದುವೆಯಂತಹ ವಿಷಯಗಳಲ್ಲಿ ಮತ್ತೆ ಮತ್ತೆ ಕಾಲೆಳೆದು ಬೀಳಿಸತೊಡಗುತ್ತದೆ. ಅಂಥದ್ದೊಂದು ಯಾತನೆ ಅನುಭವಿಸಿದವರಿಗೇ ಗೊತ್ತು. ದಿನನಿತ್ಯದ ಖರ್ಚುಗಳನ್ನು ತೂಗಿಸಲು, ತೆಗೆದುಕೊಂಡ ಸಾಲ ತೀರಿಸಲು ಪರದಾಡುವಾಗ, ಮದುವೆಗೆ ಹುಡುಗಿ ಸಿಗದೇ ವಯಸ್ಸು ಮೀರುವಾಗ, ಹಿಡಿದ ಕೆಲಸಗಳು ಹೊಳೆಯಲ್ಲಿನ ಹುಣಸೆ ಹಣ್ಣಾದಾಗ, ತನಗಿಂತ ಕಡಿಮೆ ಓದಿದ, ಕಡಿಮೆ ಬುದ್ದಿ ಮತ್ತೆಯ, ಕಡಿಮೆ ಯೋಗ್ಯತೆಯ, ಕಡಿಮೆ ವಯಸ್ಸಿನ , ತನ್ನಿಂದಲೇ ಸಹಾಯ ಪಡೆದ, ಕೆಲವೇ ವರ್ಷಗಳ ಕೆಳಗೆ ತನ್ನೆದುರು ಏನೂ ಅಲ್ಲದ ಜನಗಳು ತಾನು ಸೋತ ವಿಷಯಗಳಲ್ಲೆಲ್ಲಾ ಗೆದ್ದು ತನ್ನೆದುರೇ ಚೆಂದದ ಬದುಕನ್ನು ಬದುಕುವಾಗ ಆಗುವ ನಿರಾಸೆ...

ಅಕೇಷಿಯಾ ಹಾಗೂ ಮ್ಯಾಂಜಿಯಮ್

 ಸುಮಾರು 2004-05 ರ ಸಮಯದಲ್ಲಿ ಅರಣ್ಯ ಇಲಾಖೆ ಮೂಡಿಗೆರೆ ತಾಲ್ಲೂಕಿನಾದ್ಯಂತ ಮ್ಯಾಂಜಿಯಮ್ ಎಂಬ ಮಲೇಶಿಯಾ ಮೂಲದ ಗಿಡಗಳನ್ನು ಉಚಿತವಾಗಿ ಹಂಚಿತ್ತು. ನನಗಿನ್ನೂ ನೆನಪಿದೆ, ಗಿಡಗಳನ್ನು ಇಲಾಖೆಯ ನೌಕರರು ಎಷ್ಟು ಉತ್ಸಾಹದಿಂದ ಹಂಚಿದ್ದರೆಂದರೆ, ತಮ್ಮ ಈ ಮ್ಯಾಂಜಿಯಮ್ ನಿಂದ ಇಡೀ ಊರು ಉದ್ಧಾರವಾಗಿಬಿಡುತ್ತದೆಯೆಂಬಂತಾಡುತ್ತಿದ್ದರು.  ಹಲವಾರು ಜನ ನೆಟ್ಟರು. ನಾನೂ ನೆಟ್ಟೆ.    ನೇರವಾಗಿ ಎತ್ತರಕ್ಕೆ ಬೆಳೆದು ಹರಡಿಕೊಳ್ಳುವ ಈ ಮರ ತನ್ನ ಕಾಲಬುಡದಲ್ಲಿ ಅದರಪ್ಪನಾಣೆಗೂ ಒಂದೇ ಒಂದು ಲಂಟಾನದ ಗಿಡವನ್ನೂ ಸಹ ಬೆಳೆಯಲು ಆಸ್ಪದ ಕೊಡಲಿಲ್ಲ. ತನ್ನ ವ್ಯಾಪ್ತಿಯ ಸುತ್ತಾ ಮಳೆಗೆ ಕೊಳೆಯದ, ಬಿಸಿಲಿಗೆ ಮಣ್ಣಾಗದ ಪ್ಲಾಸ್ಟಿಕ್ ನ ಸೋದರನಂತಹ ಎಲೆಯನ್ನುದುರಿಸುತ್ತಾ ಹಾಯಾಗಿ ತೂಗಾಡುತ್ತಾ ನಿಂತಿತು. ಯಾವತ್ತಿಗೂ ಒಂದು ಹಣ್ಣನ್ನು ಬಿಡದ, ಹೂವನ್ನೂ ಸೃಷ್ಟಿಸದ ಹಕ್ಕಿಗಳಿಗಾಗಿ ರೆಂಬೆಯನ್ನೂ ಚಾಚದ ಬಿಕನಾಸಿ ಮರ ಅರಣ್ಯ ಇಲಾಖೆಗೆ ಕಲ್ಪವೃಕ್ಷದಂತೆ ಕಂಡಿದ್ದು ಮಾತ್ರ ಈ ಶತಮಾನದ ಕೌತುಕ.!  ಗಿಡ ಅತಿ ವೇಗವಾಗಿ ಬೆಳೆದು ಆರು ತಿಂಗಳೊಳಗೆ ಆರಡಿ ದಾಟಿತು. ಏಳನೆ ತಿಂಗಳು ತುಂಬುವ ಹೊತ್ತಿಗೆ " ಮ್ಯಾಂಜಿಯಮ್  ಪರಿಸರಕ್ಕೆ ಧಕ್ಕೆ ತರುವ ಜಾತಿಯಾಗಿರುವುದರಿಂದ ಯಾರೂ ಕೂಡಾ ಬೆಳೆಯಬಾರದು" ಎಂಬ ಆದೇಶವೊಂದು ಸರ್ಕಾರದಿಂದ ಹೊರಬಿತ್ತು.! ನಾನು ಮ್ಯಾಂಜಿಯಮ್ ಬಿಟ್ಟು ಬೇರೇನೂ ಬೆಳೆಯುವುದಿಲ್ಲ ಎಂದು ಗೋಳು ಹುಯ್ಯುತ್ತಾ ಯಾವನು ತಾನೆ ಇವರ ಕಛೇರಿ ...