Skip to main content

Posts

Showing posts from August, 2020
 ಎರಡು ವರ್ಷಗಳ ಹಿಂದೆ ನಾವು ವಿರಾಜಪೇಟೆಯಿಂದ ಇರಿಟ್ಟಿ ಎನ್ನುವ ಕೇರಳದ ಗಡಿಭಾಗದ ಊರಿಗೆ ಹೋಗಿದ್ದೆವು. ಕರ್ನಾಟಕದ ಗಡಿ ದಾಟುತ್ತಿದ್ದಂತೆಯೇ ಎಲ್ಲಿ ನೋಡಿದರಲ್ಲಿ ಗುಡ್ಡ , ಕಾಡು ಕಡಿದು ಕಟ್ಟಡಗಳ ನಿರ್ಮಾಣ, ಗೆರೆ ಅಗೆದು ರಸ್ತೆ ಅಗಲೀಕರಣ, ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಯ ಕಣಿವೆಗೆ ರಸ್ತೆ ವಿಸ್ತರಣೆಯ ತಡೆಗೋಡೆ ನಿರ್ಮಾಣ ನಡೆಯುತ್ತಿತ್ತು. ಕಣಿವೆಯಾಚೆಗಿನ ಗುಡ್ಡವನ್ನು ಇನ್ಯಾವುದೋ ಕಾಮಗಾರಿಗಾಗಿ ಜೆಸಿಬಿಗಳು ಬಗೆಯುತ್ತಿದ್ದವು. ಇನ್ನೊಂದು ಬದಿಯಲ್ಲಿ ರಬ್ಬರ್ ತೋಟಗಳು. ನದಿಯ ಕಣಿವೆಯ ಅಂಚಿಗೇ ಮನೆಗಳು, ಅಂಗಡಿ-ಹೋಟೆಲುಗಳು. ಒಟ್ಟಾರೆಯಾಗಿ ಆ ಇಡೀ ಪರಿಸರ ಒಂದು ರೀತಿಯ ಕೃತಕ ನಿರ್ಮಾಣದ ಧಾವಂತಕ್ಕೆ ಬಿದ್ದಂತೆ ತೋರುತ್ತಿತ್ತು.  ಕೇರಳದ ಆ ಊರು ಮನುಷ್ಯನ ಕೈಚಳಕಕ್ಕೆ ಸಿಕ್ಕಿ ಚಿತ್ರವಿಚಿತ್ರ ರೂಪ ಪಡೆಯುತ್ತಿರುವ ಪಶ್ಚಿಮ ಘಟ್ಟದ ಪ್ರತಿನಿಧಿಯಂತೆ ಗೋಚರವಾಗುತ್ತಿತ್ತು.  ಇವತ್ತು ಮಾನವ ಕೇಂದ್ರಿತ ವ್ಯವಸ್ಥೆಯು ಪ್ರಕೃತಿಯ ಮೇಲೆ ಹೊಸ ಹೊಸಾ ಆವಿಷ್ಕಾರಗಳ ಪ್ರಯೋಗಗಳನ್ನು ಎಗ್ಗಿಲ್ಲದೇ ನಡೆಸುತ್ತಿದೆ.  ಇದೊಂತರಾ ತಾಯಿಯ ಎದೆಯೊಳಗೆ ಕೃತಕ  ಹಾಲನ್ನು ಸಿರಿಂಜಿನ ಮೂಲಕ ಒಳಸೇರಿಸಲು ಪ್ರಯತ್ನಿಸಿದಂತೆ.!  ಇದಕ್ಕೆ ಆಧುನಿಕ ವಿಜ್ಞಾನ ಎಂದು ಹೆಸರು.!  ಇದರ ಹೆಸರಿನಲ್ಲಿಯೇ ಭೂ ರಚನೆಯ ವಿರುದ್ಧವಾಗಿ ರಸ್ತೆ, ಕೆನಲ್ ,  ಸುರಂಗ ಮಾರ್ಗ, ಅತಿ ಭಾರದ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತದೆ. ಅವೈಜ್...

ಅಂತರಂಗದ ಕೊಳಕಿಗೆ ಬಹಿರಂಗದಲ್ಲಿ ಮದ್ದಿಲ್ಲ...!

ಇತ್ತೀಚೆಗೆ  ತಾರತಮ್ಯದ ಕುರಿತಾಗಿ ಒಂದು ಚರ್ಚೆ.  ಹಿಂದಿನ ಕಾಲದಲ್ಲಿ ಮೇಲ್ಜಾತಿಯವರು ಕೆಳಜಾತಿಯವರಿಗೆ ಕುರೂಪಿ ಹೆಸರುಗಳನ್ನಿಡುತ್ತಿದ್ದರು ಎಂಬುದು ಚರ್ಚೆಯ ವಸ್ತು.  ಬ್ರಾಹ್ಮಣರು ತಮ್ಮ ಮಕ್ಕಳಿಗಾದರೆ ಶ್ಯಾಮ, ವಿನಾಯಕ, ಗಣೇಶ, ರಾಘವೇಂದ್ರ, ಮಂಜುನಾಥ ಎಂದೆಲ್ಲಾ ಚೆಂದದ ಹೆಸರಿಟ್ಟು, ತಮ್ಮಲ್ಲಿಗೆ ನಾಮಕರಣದ ಮನವಿ ಹೊತ್ತು ಬರುತ್ತಿದ್ದ ತಮಗಿಂತಾ ಕೆಳಜಾತಿಯವರಿಗೆ ಸಣ್ಣೇಗೌಡ, ದೊಡ್ಡೇಗೌಡ, ಗಿಡ್ಡೇಗೌಡ, ಉದ್ದೇಗೌಡ ಎಂಬುದಾಗಿಯೂ, ಬಂದವರು ದಲಿತರಾಗಿದ್ದಲ್ಲಿ ಕರಿಯ, ಬಿಳಿಯ, ಸಣ್ಣ, ದೊಡ್ಡ ಅಂತಲೂ ಹೆಸರು ಸೂಚಿಸುತ್ತಿದ್ದರು ಹೀಗಾಗಿ ನಮಗೆಲ್ಲಾ ಕೆಟ್ಟ ಹೆಸರು ಅವರಿಗೆ ಮಾತ್ರ ಚೆಂದದ ಹೆಸರು. ಇದೂ ಕೂಡಾ ಜಾತಿ ತಾರತಮ್ಯದ ಒಂದು ಶೋಷಣೆ ಎಂಬುದು ಅವತ್ತಿನ ಚರ್ಚೆ.  ಇರಬಹುದೇನೋ... ಆದರೆ ಇವತ್ತಿನ ಕಾಲಕ್ಕೆ ಆ ವಾದ ಅಪ್ರಸ್ತುತ. ಕಾರಣ, ಈಗ ಬಹುತೇಕರು ತಮ್ಮ ಮಕ್ಕಳಿಗೆ ಅವರವರೇ ಹೆಸರಿಟ್ಟುಕೊಳ್ಳುತ್ತಾರೆ ಮತ್ತು ಚೆಂದದ ಹೆಸರಿಟ್ಟುಕೊಳ್ಳುತ್ತಾರೆ. ಕೆಲವು ಹೆಸರುಗಳಿಗಂತೂ ಯಾವ ವ್ಯಾಕರಣ ಗ್ರಂಥ ಹುಡುಕಿದರೂ ಅರ್ಥ ಸಿಗಲಾರದು.!  ಇನ್ನು ಕೆಲವು ಹೆಸರುಗಳು ಕೇಳಿದ ಐದು ನಿಮಿಷಕ್ಕೆ ಮರೆತೇ ಹೋಗಿಬಿಡುತ್ತವೆ. ಮತ್ತೆ ಕೆಲವು ಉಚ್ಚರಿಸಲೇ ಹರಸಾಹಸ ಪಡಬೇಕು. ಹೀಗಾಗಿ ಈಗ ಕರಿಯ, ಬಿಳಿಯ, ಗಿಡ್ಡ ಎಂಬ ಹೆಸರುಗಳೆಲ್ಲಾ ಇತಿಹಾಸ ಸೇರಿಕೊಳ್ಳುತ್ತಿವೆ.  ಬ್ರಾಹ್ಮಣರು ಅದೆಷ್ಟು ಮಕ್ಕಳಿಗೆ ಹೆಸರಿಟ್ಟರೋ ತಿಳಿಯದು, ಆದರೆ ನ...