Skip to main content

Posts

Showing posts from April, 2020

ನಿಮ್ಮ ಬ್ರೈನ್ ಆರೋಗ್ಯವಾಗಿದೆಯಾ...!?

ಸಣ್ಣದೊಂದು ಟೆಸ್ಟ್! ನಿಮಗೆ ಇತ್ತೀಚೆಗೆ ಎಷ್ಟು ಜನರ ಮೊಬೈಲ್ ನಂಬರ್ ಗಳು ನೆನಪಿವೆ ? ಬೆಂಗಳೂರಿನಂತಹ ನಗರದ ಒಂದು ಸಲ ಹೋಗಿದ್ದ ಯಾವುದೋ ಬಡಾವಣೆಯ ಯಾವುದೊ ರಸ್ತೆಯ ವಿಳಾಸ ಹಲವು ತಿಂಗಳ ನಂತರ ಮತ್ತೆ ಹೋಗಲೆಂದು ನೆನಪಿಸಿಕೊಂಡರೆ ನೆನಪಾಗುತ್ತದಾ ? ಫೇಸ್ಬುಕ್ಕಿನಲ್ಲೊ ಮತ್ತೆಲ್ಲೋ ಒಂದು ಸಲ ಭೇಟಿಯಾದ, ಮೆಸೇಜ್ ಮಾಡಿಕೊಂಡ, ಕರೆವಮಾಡಿದ ವ್ಯಕ್ತಿ ಮತ್ತಿನ್ನ್ಯಾವಾಗಲೋ ಸಿಕ್ಕಿದರೆ ಥಟ್ಟನೆ ಗುರುತು ಹತ್ತುತ್ತದಾ ? ಹೌದು ಇವೆಲ್ಲಾ ಮೊದಲಿನಂತೆಯೇ ನನಗೆ ಸಲೀಸಾಗಿ ಒದಗುತ್ತಿದೆ ಎಂದರೆ  ಅವನು ಯಾವ ತಂತ್ರಜ್ಞಾನಕ್ಕೂ ಗುಲಾಮನಾಗಿಲ್ಲ ಎಂದರ್ಥ. ಹಾಗೂ ಅವನು ಈ ಜಗತ್ತಿನ ಆರೋಗ್ಯವಂತ ವ್ಯಕ್ತಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಮೊಬೈಲ್, ಸ್ಮಾರ್ಟ್ ಫೋನ್ ಇರದೇ ಇದ್ದ ಕಾಲದಲ್ಲಿ ನಮ್ಮ ತಲೆಯೊಳಗೆ ಅದೆಷ್ಟೊಂದು ದೂರವಾಣಿ ಸಂಖ್ಯೆಗಳು ಹುದುಗಿ ಕುಳಿತಿದ್ದವು.! ಎಸ್ಟಿಡಿ ಬೂತ್ ಅಥವಾ ಮನೆಯ ಸ್ಥಿರ ದೂರವಾಣಿಯೆದುರು ಕುಳಿತರೆ ಹತ್ತಾರು ಜನರಿಗೆ ಯಾವುದೇ ಡೈರಿ ತಡಕಾಡದೇ ನಂಬರುಗಳನ್ನು ನೆನಪಿಸಿಕೊಂಡು ಕರೆ ಮಾಡುತ್ತಿದ್ದೆವು. ಆದರೆ ಇವತ್ತು ಅತ್ಯಂತ ಅಗತ್ಯ ಸಂಖ್ಯೆಗಳೂ ನೆನಪಾಗುವುದಿಲ್ಲ. ಪ್ರತಿಯೊಂದಕ್ಕೂ ಫೋನ್ ತಡಕಾಡುತ್ತೇವೆ.  ಇದು ನಮಗಂಟಿರುವ ದೊಡ್ಡ ಸಮಸ್ಯೆಯೆಂದು ನಮಗರಿವಾಗುವುದು ಒಂದೋ ಫೋನ್ ಬ್ಯಾಟರಿ ಸತ್ತುಹೋದಾಗ ಇಲ್ಲವೇ ಫೋನ್ ಕಳೆದುಹೋದಾಗ.! ಇನ್ನು ಮೊದಲಿನಂತೆ ಒಂದು ಬಾರಿ ಹೋಗಿದ್ದ ವಿಳಾಸಕ್ಕೆ ಮತ್ತೆ ಹಲವು ತಿಂಗಳ ...

ಹುಲಿ ಬಂತು ಹುಲಿ

ನನ್ನೂರಿನ ಸರಹದ್ದಿನ ತೋಟವೊಂದಕ್ಕೆ ಹುಲಿ ಬಂದ ಬಗ್ಗೆ ಸುದ್ದಿಯೊಂದು ನಿನ್ನೆ ನಮ್ಮ ವಾಟ್ಸಾಪ್ ಗ್ರೂಪ್'ಗೆ ಬಂದಿತ್ತು. ಕಾಕತಾಳೀಯವೆಂಬಂತೆ ನಾನು ಅದೇ ಹೊತ್ತಿನಲ್ಲಿ ಮಲೆಗಳಲ್ಲಿ ಮದುಮಗಳು ಮಹಾ ಕಾವ್ಯದಲ್ಲಿನ ನಾಯಿಗುತ್ತಿ ದಾರಿಯಲ್ಲೆದುರಾದ ಹುಲಿಯನ್ನು ಓಡಿಸುವ ಪ್ರಸಂಗವನ್ನು ಓದುತ್ತಿದ್ದೆ! ಹುಲಿಯನ್ನು ಬೆದರಿಸಿ ಓಡಿಸಿದ ನಂತರ ಗುತ್ತಿ ಮಾಮೂಲಿಯಾಗಿ ಹೆಜ್ಜೆ ಹಾಕುತ್ತಾನೆ.  ಹುಲಿಯೂ ಕೂಡಾ ಪರಿಸರದ ಉಳಿದೆಲ್ಲಾ ಪ್ರಾಣಿಗಳಂತೆ ಒಂದು ಪ್ರಾಣಿ ಅಷ್ಟೇ ಎಂಬಂತೆ. ಅವತ್ತಿನ ಕಾಲಕ್ಕೆ ಅದು ನಿಜ ಕೂಡಾ.... ಒಂಚೂರು ಹೆಚ್ಚಿನ ಕಿರಿಕಿರಿಯ ಪ್ರಾಣಿ ಅಷ್ಟೇ.!   ಮನೆಯ ಪಕ್ಕದ ಹಟ್ಟಿಗೇ ಬಂದು ದನ ಮುರಿಯುತ್ತಿದ್ದ ಹುಲಿಯ ಕತೆಯನ್ನು ದಳಿಮನೆಯ ದೊಡ್ಡ ಕುರ್ಚಿಯಲ್ಲಿ ಕುಳಿತು ಅಜ್ಜಿ ತಣ್ಣಗೆ ಹೇಳುವಾಗ ಕೇಳುತ್ತಿದ್ದ ನಮಗೆ ಕೂದಲೆಲ್ಲಾ ನೆಟ್ಟಗಾಗುವಂಥಾ ರೋಮಾಂಚನ. ಕತೆ ಮುಂದುವರಿದಂತೆ ಗಳಿಗೆಗೊಮ್ಮೆ ದಳಿಯಾಚೆಯ ಕತ್ತಲಿನೊಳಕ್ಕೆ ಒಮ್ಮೆ ದೀರ್ಘವಾಗಿ ಹೊಕ್ಕು ಹುಡುಕುತ್ತಿದ್ದೆವು. ಹುಲಿ ಹೊರಗೆಲ್ಲಾದರೂ ಅವಿತು ಕುಳಿತು ಅಜ್ಜಿಯ ಕಥೆಗೆ ಕಿವಿಗಿವಿ ಕೊಡುತ್ತಿದೆಯೇನೋ ಎಂಬ ಅವ್ಯಕ್ತ ಅನುಮಾನ ನಮಗೆ.! ಮಲೆನಾಡಿನ ಹಳೆಯ ಬಹುತೇಕ ಕತೆಗಳು ಹುಲಿಯೊಂದಿಗೇ ಮಿಳಿತವಾಗಿರುತ್ತಿತ್ತು. ಆದರೆ ಎಂದಿಗೂ ಹುಲಿ ಬಂತೆಂದು ಊರು ಬಿಟ್ಟ, ತೋಟ ಗದ್ದೆಗೆ ಹೋಗುವುದನ್ನು ಬಿಟ್ಟ ಉದಾಹರಣೆಗಳು ಇಲ್ಲವೇ ಇಲ್ಲ. ಹೆಚ್ಚೆಂದರೆ ಹುಲಿ ಕಾಟ ಮಿತಿಮೀರಿದರೆ ಕೋವಿ...

ತೇಜಸ್ವಿ ಸಿಕ್ಕಿದ್ರು

ಪಿಯುಸಿಗೆ ಹೋಗುತ್ತಿದ್ದಾಗ ಪ್ರತಿದಿನ ಬಸ್ಸು ಇಳಿದ ತಕ್ಷಣ ನಮಗೊಂದಿಬ್ಬರಿಗೆ ಎರಡು ಅಭ್ಯಾಸಗಳಿದ್ದವು. ಮೊದಲನೆಯದ್ದು ಬಸ್ ಇಳಿದ ತಕ್ಷಣ ನೇರವಾಗಿ  ಬಸ್ ನಿಲ್ದಾಣದ ಎದುರಿಗಿರುವ ಪೋಸ್ಟ್ ಆಫೀಸಿಗೆ ಹೋಗಿ ಊರಿನಲ್ಲಿ ಅವರಿವರು ಕೊಟ್ಟ ಫೋನ್ ಬಿಲ್ಲುಗಳನ್ನು ಕಟ್ಟುವುದು, ಯಾವುದಾದರೂ ಪೋಸ್ಟ್ ಕವರ್ ಗಳಿದ್ದರೆ ಆಳೆತ್ತರದ ಡಬ್ಬಿಯೊಳಗೆ ಹಾಕಿ ಆ ಡಬ್ಬಿಯ ಬಾಯಿಯೊಳಕ್ಕೆ ಕೈ ತೂರಿಸಿ ಯಾವುದಾದರೂ ಕವರ್ ಗಳು ಸಿಗಬಹುದೇನೋ ಎಂದು ತಡಕಾಡುವ ಕಿತಾಪತಿ. ಅದು ಮುಗಿದಮೇಲೆ ಸೀದಾ ಸಾರ್ವಜನಿಕ ಲೈಬ್ರರಿಗೆ ಹೋಗಿ ಎತ್ತರದ ಮೇಜಿನ ಮೇಲೆ ಸಾಲಾಗಿ ಜೋಡಿಸಿಟ್ಟ ಕನ್ನಡ ಪತ್ರಿಕೆಗಳನ್ನು ಓದಲು ಮೊದಲೇ ಬಂದು ಓದುತ್ತಿದ್ದ ಹುಡುಗರನ್ನು ಬದಿಗೆ ತಳ್ಳುತ್ತಾ ಸಂಧಿಯಲ್ಲಿ ತಲೆ ತೂರಿಸುತ್ತಾ ಓದಲು ಪ್ರಯತ್ನಿಸುವುದು. ಅಲ್ಲಿ ಜಾಗ ಸಿಗದಿದ್ದರೆ ಬಲಬದಿಯಲ್ಲಿ ಜೋಡಿಸಿಟ್ಟಿರುತ್ತಿದ್ದ  ಖಾಲಿ ಹೊಡೆಯುತ್ತಿದ್ದ ಇಂಗ್ಲೀಷ್ ಪೇಪರಿನ ಸಾಲಿನ ಮೇಜಿನ ಮೇಲೆ ತಲೆಯಿಟ್ಟು ಪತ್ರಿಕೆ ತಿರುವಿ ಹಾಕುತ್ತಾ ಚಿತ್ರಗಳನ್ನು ನೋಡುವುದು. ಹೀಗೆ ಪೋಸ್ಟ್ ಆಫೀಸಿಗೆ ಹೋಗುವಾಗಲೆಲ್ಲಾ( ವಾರದಲ್ಲಿ ಎರಡು ಮೂರು ಸಲ) ಬಿಳೀ ಗಡ್ಡದಾರಿ ವ್ಯಕ್ತಿಯೊಬ್ಬರು ದೊಡ್ಡ ಕನ್ನಡಕ ಹಾಕಿಕೊಂಡು ಪೋಸ್ಟ್ ಆಫೀಸಿನ ಒಳಕ್ಕೊ ಅಥವಾ ಅಲ್ಲಿಂದ ಹೊರಕ್ಕೋ ಹೋಗುತ್ತಿದ್ದರು. ಕೆಲವೊಮ್ಮೆ ನಾವು ಗೇಟಿನೊಳಗೆ ಆಡಿಯಿಡುವಾಗ ಆ ವ್ಯಕ್ತಿ ಮೆಟ್ಟಿಲಿಳಿದು ಸಿಂಗಲ್ ಸೀಟಿನ ಸ್ಕೂಟರ್ ಹತ್ತಿ ಹೋಗುತ್ತಿದ್ದರು. ...